ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಎಸ್‌. ವೆಂಕಟ ನಾರಾಯಣ ಭಟ್ಟಿ ಭೇಟಿ

0

ಸುಬ್ರಹ್ಮಣ್ಯ: ಇಲ್ಲಿನ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಚ್ಚ ನ್ಯಾಯಾಲಯದ ನ್ಯಾ. ಎಸ್‌.ವೆಂಕಟ ನಾರಾಯಣ ಭಟ್ಟಿ ಭೇಟಿ ನೀಡಿದರು.

ಅವರು ಸಂಕಲ್ಪ ನೆರವೇರಿಸಿ ಶೇಷ ಸೇವೆ ಮಾಡಿ, ಶ್ರೀ ದೇವರ ದರುಶನ ಪಡೆದರು.ದೇವಳದ ಅರ್ಚಕ ವೇ.ಮೂ. ರಮೇಶ ನೂರಿತ್ತಾಯ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಬಳಿಕ ಹೊರಾಂಗಣದಲ್ಲಿರುವ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದಸ್ವೀಕರಿಸಿದರು. ಅವರೊಂದಿಗೆ ಡಿ.ಜಿ.ಶಾಂತಿಭೂಷಣ್, ಹಿರಿಯ ನ್ಯಾಯವಾದಿ ಅರುಣ್ ಶ್ಯಾಂ, ರಾಜಶೇಖರ್ ಇಲಿಯಾರ್, ಸಚಿನ್ ಮತ್ತು ಪವನ್ ಇದ್ದರು. ಪುರೋಹಿತ ಪ್ರಸನ್ನ ಹೊಳ್ಳ ವೈಧಿಕ ವಿಧಿವಿಧಾನಗಳು ಹಾಗೂ ಪೂಜೆಯನ್ನು ನೆರವೇರಿಸಿದರು. ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ದೇವಳದ ಕಾರ್ಯ ನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೋಭಾ ಗಿರಿಧರ್‌, ಶಿಷ್ಠಾಚಾರ ಅಧಿಕಾರಿ ಉಪಸ್ಥಿತರಿದ್ದರು.

ಶ್ರೀ ದೇವರ ದರುಶನದ ಬಳಿಕ ಶ್ರೀ ಕ್ಷೇತ್ರದ ಹಸಿರ ಸಮೃದ್ಧಿ ಯೋಜನೆಯ ಭಾಗವಾಗಿ ಶ್ರೀ ದೇವಳದ ಉಪಯೋಗಕ್ಕಾಗಿ ಪವಿತ್ರ ಶ್ರೀ ಗಂಧದ ಸಸಿಯನ್ನು ಶ್ರೀ ದೇವಳದ ಸಮೀಪ ನೆಟ್ಟರು.

LEAVE A REPLY

Please enter your comment!
Please enter your name here