ಸೆ.7: ನಿಗೂಢ ಗುರುತು ಕನ್ನಡ ಚಲನಚಿತ್ರದ ಟ್ರೈಲರ್ ಬಿಡುಗಡೆ

0

ಪುತ್ತೂರು: ಶ್ರೀಓಂ ಸಾಯಿ ಪ್ರೊಡಕ್ಷನ್ಸ್ ಅರ್ಪಿಸುವ ನಿಗೂಢ ಗುರುತು ಕನ್ನಡ ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಸೆ.7ರಂದು ಬೆಳಿಗ್ಗೆ 10.30ರಿಂದ ಮಂಗಳೂರು ರಥಬೀದಿ ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಬೆಳಿಗ್ಗೆ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ನಿಗೂಢ ಗುರುತು ಚಿತ್ರದ ವಿಶಾಲ ಕರ್ನಾಟಕದ ಹಂಚಿಕೆದಾರ ತುಕಾರಾಮ ಬಾಯಾರು ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಕಲರ್‍ಸ್ ಕನ್ನಡದ ಲಕ್ಷ್ಮೀ ಬಾರಮ್ಮ ದಾರಾವಾಹಿ ನಿರ್ದೇಶಕ ಯಶವಂತ್, ಕಿರುತೆರೆ ನಿರ್ದೇಶಕ ವಿಜಯಕೃಷ್ಣ ಕೆ.ಆರ್. ಉಡುಪಿ, ರಂಗಕಲಾವಿದೆ ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ, ದ.ಕ. ಚಿನ್ನ, ಬೆಳ್ಳಿ, ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್.ಹರೀಶ್ ಆಚಾರ್ಯ, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಶುಭಾಶಂಸನೆ ಮಾಡಲಿದ್ದಾರೆ. ದ.ಕ.ಜಿಲ್ಲಾ ಬೆಜೆಪಿ ಕಾರ್ಯಕಾರಿಣಿ ಸದಸ್ಯ ರೂಪೇಶ್ ಆಚಾರ್ಯ, ನಿಗೂಢಗುರುತು ಚಿತ್ರ ನಿರ್ಮಾಪಕ ಪ್ರಿಯಾ ಚಿದಾನಂದ್ ಪೆರ್ಲ, ಸಹನಿರ್ಮಾಪಕ ಚಿದಾನಂದ್ ಪೆರ್ಲ, ನಿರ್ದೇಶಕ ಉದಯಾನಂದ ಬರ್ಕೆ, ಉಪ್ಪಿನಂಗಡಿ ರಾಘವೇಂದ್ರ ಜ್ಯುವೆಲ್ಲರ್‍ಸ್ ಮಾಲಕ ಪ್ರಕಾಶ್ ಆಚಾರ್ಯ ಸಿದ್ಯಾಳ, ಕೊಯಿಲ ಗ್ರಾ.ಪಂ.ಪಿಡಿಒ ಸಂದೇಶ್ ಕೆ.ಎನ್., ಉಪಸ್ಥಿತರಿರಲಿದ್ದಾರೆ. ಗಣ್ಯರ ಸಮ್ಮುಖದಲ್ಲಿ ಲಕ್ಕಿ ಕೂಪನ್ ಡ್ರಾ. ನಡೆಯಲಿದೆ. ಮಂಗಳೂರು ಶ್ರೇಯಾ ಮೆಲೊಡಿಯಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here