ಕಡಬ ನೂತನ ತಹಸೀಲ್ದಾರ್ ಖಜೂರೆ ಅಧಿಕಾರ ಸ್ವೀಕಾರ

0

ಕಡಬ: ಕಡಬ ತಾಲೂಕು ನೂತನ ತಹಸಿಲ್ದಾರ್ ಆಗಿ ಪ್ರಭಾಕರ ಖಜೂರೆ ಅವರು ಸೋಮವಾರ ಸಂಜೆ ಕಡಬ ತಾಲೂಕು ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.


ಮೂಲತಃ ಬೀದರ್ ಜಿಲ್ಲೆಯ ಹುಮ್ನಬಾದ್ ನಿವಾಸಿಯಾಗಿರುವ ಪ್ರಭಾಕರ ಖಜೂರೆ ಅವರು ಈ ಹಿಂದೆ ಮಂಗಳೂರಿನ ಉಳ್ಳಾಲದಲ್ಲಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇವರನ್ನು ಕಡಬಕ್ಕೆ ತಹಸೀಲ್ದಾರ್ ಆಗಿ ನೇಮಕಗೊಳಿಸಿ ಆ 11ರಂದು ಸರಕಾರ ಆದೇಶ ಹೊರಡಿಸಿತ್ತು. ಆದರೆ ನಾನಾ ಕಾರಣಗಳಿಂದ ಅವರು ಕಡಬದಲ್ಲಿ ಅಧಿಕಾರ ವಹಿಸಿಕೊಂಡಿರಲಿಲ್ಲ. ಈ ಮಧ್ಯೆ ಸುಳ್ಯ ತಹಸೀಲ್ದಾರ್ ಮಂಜುನಾಥ್ ಅವರು ಪ್ರಭಾರ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರದಿಂದ ನೂತನ ತಹಸಿಲ್ದಾರ್ ಜನರ ಸೇವೆಗೆ ಸಿಗಲಿದ್ದಾರೆ ಎಂದು ಕಛೇರಿ ಮೂಲ ತಿಳಿಸಿದೆ. ಕಡಬ ತಹಸೀಲ್ದಾರ್ ಕಛೇರಿಯಲ್ಲಿ ಉಪತಹಸೀಲ್ದಾರ್ ಮನೋಹರ ಕೆ.ಟಿ ನೂತನ ತಹಸಿಲ್ದಾರ್ ಅವರನ್ನು ಬರಮಾಡಿಕೊಂಡರು.

LEAVE A REPLY

Please enter your comment!
Please enter your name here