ಈಶ್ವರಮಂಗಲ  ಮೊಸರು ಕುಡಿಕೆ ಉತ್ಸವ

0

ಈಶ್ವರಮಂಗಲ: ಈಶ್ವರಮಂಗಲ ಹಿಂದೂ ಜಾಗರಣ  ವೇದಿಕೆ ವತಿಯಿಂದ  ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 8 ನೇ ವರ್ಷದ  ಮೊಸರು ಕುಡಿಕೆ ಉತ್ಸವ ಸೆ.7 ರಂದು ನಡೆಯಿತು.

ಈಶ್ವರಮಂಗಲ  ಶ್ರೀ ಪಂಚಲಿಂಗೇಶ್ವರ  ದೇವಸ್ಥಾನದಿಂದ  ಕೃಷ್ಣ ವೇಷದಾರಿ ಪುಟಾಣಿಗಳಿಂದ ಬೃಹತ್  ಮೆರವಣಿಗೆಯಿಂದ ಕಾರ್ಯಕ್ರಮ ಆರಂಭಗೊಂಡು ಪೇಟೆಯಲ್ಲಿ ಅಟ್ಟಿ ಮಡಿಕೆ ಹೊಡೆಯುದರೊಂದಿಗೆ, ಕಬಾತ್ ಹೊಡೆಯುವ ಸ್ಪರ್ಧೆಯು ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ  ವೇದಿಕೆಯ ಗೌರವಾಧ್ಯಕ್ಷ  ಶ್ರೀ ಕೃಷ್ಣ ಭಟ್‌ ಮುಂಡ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಪುತ್ತೂರು ಯುವ ಉದ್ಯಮಿ ಸಹಜ್‌ ರೈ ಬಳಜ್ಜ ,ವೈದ್ಯ  ಡಾ.ಕುಮಾರ್‌ ಕತ್ರಿಬೈಲು ,ಪಿ ಡಬ್ಲೂ ಡಿ ಕಾಂಟ್ರಾಕ್ಟರ್ ಸನತ್‌ ರೈ ಮೂಡಾಯೂರು,  ಹಿಂದು ಜಾಗರಣ ವೇದಿಕೆ ಜಿಲ್ಲಾ ಸಮಿತಿ ಸದಸ್ಯ ಅಶೋಕ್‌ ತ್ಯಾಗರಾಜ ನಗರ , ಹಿಂದೂ ಐಕ್ಯವೇದಿ ಕಾಸರಗೋಡು ತಾಲೂಕು ಕಾರ್ಯದರ್ಶಿ ಶಿವ ಪ್ರಸಾದ್‌  ವಾಲ್ತಾಜೆ , ಈಶ್ವರಮಂಗಲ  ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರಾದ ಪ್ರಜ್ವಲ್ ಮಡ್ಯಲಮಜಲು , ಕಾರ್ಯದರ್ಶಿ ಗೌರೀಶ್‌ ಉಪಸ್ಥಿತರಿದ್ದರು.  ಜಾಗದ ಮಾಲಕ  ಶಿವರಾಮ್  ಕಾವೇರಿಮೂಲೆ ಉಪಸ್ಥಿತರಿದ್ದರು.

ಕಬಾತ್‌  ಸ್ಪರ್ಧೆಯಲ್ಲಿ‌ ವಿಜೇತರಾದ ಕಡಬ ವಿಷ್ಣು ಫ್ರೆಂಡ್ಸ್ ಇವರಿಗೆ  ಹಿಂದೂ ಮುಂಖಡ ಅರುಣ್‌ ಕುಮರ್‌ ಪುತ್ತಿಲ ಬಹುಮಾನ ವಿತರಿಸಿದರು. ಅಟ್ಟಿ ಮಡಿಕೆ ಒಡೆಯುವ ಸ್ಪಧೆಯಲ್ಲಿ ಭಾಗವಹಿಸಿದ ತಂಡಗಳಿಗೆ ಸ್ಮರಣಿಕೆ ನೀಡಲಾಯಿತು.  ಜಾರು ಕಂಬ ಸ್ಪಧೆಯಲ್ಲಿ ಸುಳ್ಯಪದವಿನ ಸಂತು ವಿಜೇತರಾದರು.ಸುರಕ್ಷಾ ಸ್ವಾಗತಿಸಿ, ನಿಶಾಂತ ವಂದಿಸಿದರು, ರಾಜೇಶ್ ಪಂಚೋಡಿ ಚಿನ್ಮಯ್ ರೈ ಹಾಗೂ ಹಿಂದು ಜಾಗರಣ ವೇದಿಕೆಯ  ಕಾರ್ಯಕರ್ತರು ಸಹಕರಿಸಿದರು.

LEAVE A REPLY

Please enter your comment!
Please enter your name here