ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಶ್ರೀ ಗಣೇಶೋತ್ಸವ, ಆಮಂತ್ರಣ ಬಿಡುಗಡೆ

0

ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸೆ.18 ಹಾಗೂ ಸೆ.19ರಂದು ನಡೆಯುವ ಪ್ರಥಮ ವರ್ಷದ ಗೌರಿ ಹಬ್ಬ ಹಾಗೂ ಗಣೇಶೋತ್ಸವದ ಆಮಂತ್ರಣ ಬಿಡುಗಡೆ ದೇವಸ್ಥಾನದ ವಠಾರದಲ್ಲಿ ಸೆ.10ರಂದು ನಡೆಯಿತು.

ಆಮಂತ್ರಣ ಬಿಡುಗಡೆಗೆ ಮುನ್ನ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅರ್ಚಕ ಶ್ರೀ ರಾಮ ಕಲ್ಲೂರಾಯ ಅವರು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮೋಹನ್ ರೈ ಓಲೆ ಮುಂಡೋವು,ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಎನ್.ಎಸ್‌.ಡಿ ಸರ್ವೆ ದೋಳ ಗುತ್ತು,ವ್ಯವಸ್ಥಾಪನ ಸಮಿತಿ ಅಧ್ಯಕ್ಷರೂ, ಸಮಿತಿಯ ಕೋಶಾಧಿಕಾರಿ ಪ್ರಸಾದ್ ರೈ ಸೊರಕೆ,ಸಮಿತಿಯ ಸಂಚಾಲಕ ಶಿವನಾಥ ರೈ ಮೇಗಿನ ಗುತ್ತು, ಅಧ್ಯಕ್ಷರಾದ ವಿನಯಕುಮಾರ್ ರೈ ಸರ್ವೆ, ಚಲನ ಚಿತ್ರನಟ ಆರ್ಯನ್, ಸಮಿತಿಯ ಗೌರವ ಸಂಚಾಲಕರಾದ ಆನಂದ ಪೂಜಾರಿ ಸರ್ವೆ ದೋಳ ಗುತ್ತು,ಮುಂಡೂರು ಗ್ರಾಮ ಪಂಚಾಯತ್ ಸದಸ್ಯೆ ರಸಿಕಾ ಶಿವನಾಥ ರೈ ಮೇಗಿನ ಗುತ್ತು,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಧಾಕೃಷ್ಣ ರೈ ರೆಂಜಲಾಡಿ, ಪ್ರವೀಣ ಯಶೋಧರ ರೈ ಮೇಗಿನ ಗುತ್ತು, ಜಯಂತಿ ಲಿಂಗಪ್ಪ ನಾಯ್ಕ ನೆಕ್ಕಿತಡ್ಕ, ವಸಂತ ರೈ ಸೊರಕೆ, ಅಶೋಕ ನಾಯ್ಕ ಸೊರಕೆ ,ಗೌತಮ್ ರೈ ಸರ್ವೆ‌ ಶಶಿಕಿರಣ ರೈ ಸೊರಕೆ, ಅನೀಶ್ ಶೆಟ್ಟಿ ಕಲ್ಲಮೆಟ್ಟು, ದೇವಪ್ಪ ಕಾಡಬಾಗಿಲು, ಭರತ್ ಗೌಡ ತಂಬುತಡ್ಕ, ಆನಂದ ರೈ ತಿಂಗಳಾಡಿ, ಲೀಲಾವತಿ ಶಾಂತಿಗಿರಿ ಮತ್ತು ದೇವಸ್ಥಾನದ ಕಚೇರಿ ಸಹಾಯಕ ಶಿವಪ್ರಸಾದ್ ಸರ್ವೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here