ಕೊಕ್ಕಡ ಜೆಸಿಐ ‘ಜೇಸಿ ಸಪ್ತಾಹ-2023ʼ ಉದ್ಘಾಟನೆ

0

ನೆಲ್ಯಾಡಿ: ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ವತಿಯಿಂದ ನಡೆಯುವ ‘ಜೇಸಿ ಸಪ್ತಾಹ-2023’ ಇದರ ಉದ್ಘಾಟನೆ ಸೆ.9ರಂದು ಕೊಳಕ್ಕೆಬೈಲು ಸ.ಕಿ.ಪ್ರಾ. ಶಾಲೆಯಲ್ಲಿ ನಡೆಯಿತು.

ಶಾಲಾ ವಿದ್ಯಾರ್ಥಿ ನಾಯಕಿ ತನುಶ್ರೀ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಘಟಕಾಧ್ಯಕ್ಷ ಜಿತೇಶ್ ಎಲ್ ಪಿರೇರಾ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುಮಿತ್ರ, ಶಿಶಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶೋಧರ ಭಟ್‌ರವರು ಶುಭ ಹಾರೈಸಿದರು. ಎಲ್ಲಾ ಮಕ್ಕಳಿಗೂ ಅಕ್ಷರ ದೀವಿಗೆ ಕಾರ್ಯಕ್ರಮದಂತೆ ಲೈಬ್ರರಿ ಪುಸ್ತಕ ವಿತರಣೆ ಮಾಡಲಾಯಿತು. ಶಾಲೆಗೆ ಕಿಟ್ ವಿತರಣೆ ಮಾಡಲಾಯಿತು. ಮುಖ್ಯ ಶಿಕ್ಷಕಿ ಸುಗುಣಾ, ಜೇಸಿಐ ಹಿರಿಯ ಸದಸ್ಯರಾದ ಜೋಸೆಫ್ ಪಿರೇರಾ ಅವರು ಶುಭ ಹಾರೈಸಿದರು. ಜೆಸಿಂತಾ ಡಿ ಸೋಜ ಜೇಸಿ ವಾಣಿ ವಾಚಿಸಿದರು. ಗೌರವ ಶಿಕ್ಷಕಿ ಸುಮಾ ಉದ್ಘಾಟಕರ ಪರಿಚಯ ಮಾಡಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ, ನಿಕಟಪೂರ್ವ ಅಧ್ಯಕ್ಷ ಶ್ರೀಧರ ರಾವ್ ಉಪಸ್ಥಿತರಿದ್ದರು. ಅತಿಥಿ ಶಿಕ್ಷಕ ಸಂತೋಷ್ ವಂದಿಸಿದರು.
ನೆಲ್ಯಾಡಿ: ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ವತಿಯಿಂದ ನಡೆಯುವ ‘ಜೇಸಿ ಸಪ್ತಾಹ-2023’ ಇದರ ಉದ್ಘಾಟನೆ ಸೆ.9ರಂದು ಕೊಳಕ್ಕೆಬೈಲು ಸ.ಕಿ.ಪ್ರಾ. ಶಾಲೆಯಲ್ಲಿ ನಡೆಯಿತು.

ಶಾಲಾ ವಿದ್ಯಾರ್ಥಿ ನಾಯಕಿ ತನುಶ್ರೀ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಘಟಕಾಧ್ಯಕ್ಷ ಜಿತೇಶ್ ಎಲ್ ಪಿರೇರಾ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುಮಿತ್ರ, ಶಿಶಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶೋಧರ ಭಟ್‌ರವರು ಶುಭ ಹಾರೈಸಿದರು. ಎಲ್ಲಾ ಮಕ್ಕಳಿಗೂ ಅಕ್ಷರ ದೀವಿಗೆ ಕಾರ್ಯಕ್ರಮದಂತೆ ಲೈಬ್ರರಿ ಪುಸ್ತಕ ವಿತರಣೆ ಮಾಡಲಾಯಿತು. ಶಾಲೆಗೆ ಕಿಟ್ ವಿತರಣೆ ಮಾಡಲಾಯಿತು. ಮುಖ್ಯ ಶಿಕ್ಷಕಿ ಸುಗುಣಾ, ಜೇಸಿಐ ಹಿರಿಯ ಸದಸ್ಯರಾದ ಜೋಸೆಫ್ ಪಿರೇರಾ ಅವರು ಶುಭ ಹಾರೈಸಿದರು. ಜೆಸಿಂತಾ ಡಿ ಸೋಜ ಜೇಸಿ ವಾಣಿ ವಾಚಿಸಿದರು. ಗೌರವ ಶಿಕ್ಷಕಿ ಸುಮಾ ಉದ್ಘಾಟಕರ ಪರಿಚಯ ಮಾಡಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ, ನಿಕಟಪೂರ್ವ ಅಧ್ಯಕ್ಷ ಶ್ರೀಧರ ರಾವ್ ಉಪಸ್ಥಿತರಿದ್ದರು. ಅತಿಥಿ ಶಿಕ್ಷಕ ಸಂತೋಷ್ ವಂದಿಸಿದರು.

LEAVE A REPLY

Please enter your comment!
Please enter your name here