ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ 1.47 ಕೋಟಿ ಲಾಭ – ಗಣೇಶ್ ನಿಡ್ವಣ್ಣಾಯ

0

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2022-23ನೇ ಸಾಲಿನ ಆಡಿಟ್ ನಡೆದು ಸತತ 21ನೇ ಬಾರಿಗೆ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇಕಡಾ 98.64% ಸಾಲ ವಸೂಲಾತಿಯೊಂದಿಗೆ ರೂ 1.47 ಕೋಟಿ ಲಾಭ ಗಳಿಸಿದ್ದು, ಸಂಘವು ಸತತ 12 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸಂಘದ ಅದ್ಯಕ್ಷರಾದ ಗಣೇಶ್ ನಿಡ್ವಣ್ಣಾಯ ರವರು ತಿಳಿಸಿದ್ದಾರೆ.


ಸಂಘದಲ್ಲಿ 3379 ಸದಸ್ಯರಿದ್ದು, ರೂ. 5.06 ಕೋಟಿ ಪಾಲುಬಂಡವಾಳ ಮತ್ತು ರೂ.32.96 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ವರದಿ ವರ್ಷದಲ್ಲಿ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ, ಕೃಷಿಯೇತರ ಸಾಲ, ಚಿನ್ನಾಭರಣ ಈಡಿನ ಸಾಲ, ಸ್ವಸಹಾಯ ಗುಂಪು ಸಾಲ, ಇತ್ಯಾದಿಗಳಿಗೆ ರೂ 51.78 ಕೋಟಿ ಸಾಲ ವಿತರಿಸಲಾಗಿದೆ. ಕೇಂದ್ರ ಬ್ಯಾಂಕಿನಿಂದ ರೂ. 27.68 ಕೋಟಿ ಸಾಲ ಪಡೆಯಲಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸುಮಾರು 17 ಸದಸ್ಯರಿಗೆ ತಲಾ ರೂ.5000/-ದಂತೆ ರೂ.85,000 ವಿತರಿಸಲಾಗಿದೆ, ನವೋದಯದ ಚ್ವೆತನ್ಯ ವಿಮಾ ಯೋಜನೆಯಡಿ 23 ಸದಸ್ಯರಿಗೆ ರೂ.126552/- ಕ್ಲೈಂ ಬಂದಿರುತ್ತದೆ.

ಅಡಿಕೆ ಖರೀದಿ:
ಮಾಸ್ ಲಿ, ಮಂಗಳೂರು ಇವರ ಸಹಯೋಗದೊಂದಿಗೆ ರೂ 4.88 ಕೋಟಿ ಮೌಲ್ಯದ ರೈತರ ಅಡಿಕೆ ಖರೀದಿಸಲಾಗಿದೆ. ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ರಸಗೊಬ್ಬರ ಮತ್ತು ರಾಜ್ಯ ಸರಕಾರಗಳ ಪಡಿತರ ವ್ಯವಸ್ಥೆಯನ್ನು 4 ಪಡಿತರ ಶಾಖೆಗಳಲ್ಲಿ ವಿತರಿಸಲಾಗುತ್ತಿದೆ.

ಯಶಸ್ವಿನಿ ಅರೋಗ್ಯ ವಿಮೆ:
1173 ಸದಸ್ಯರು ಹವಾಮಾನ ಆಧಾರತ ಬೆಳೆವಿಮಾ ಯೋಜನೆಗೆ ಪ್ರೀಮಿಯಂ ಪಾವತಿಸಿದ್ದಾರೆ. 863 ಕುಟುಂಬದ 3158 ಸದಸ್ಯರನ್ನು ಯಶಸ್ವಿನಿ ಅರೋಗ್ಯ ವಿಮಾ ಯೋಜನೆಗೆ ನೋಂದಾಯಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯರವರು ತಿಳಿಸಿದ್ದಾರೆ.

ಸೆ. 17 ರಂದು ಸಂಘದ ಮಹಾಸಭೆ:
ಸೆ. 17 ರಂದು ಸಂಘದ ಮಹಾಸಭೆಯು ಬೆಳಿಗ್ಗೆ 9.30 ರಿಂದ ಸಂಘದ ಸಭಾಂಗಣದಲ್ಲಿ ಜರಗಲಿದ್ದು, ಪ್ರತಿವರ್ಷದಂತೆ ಈ ವರ್ಷ ಕೂಡ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಡಿಗ್ರಿಯಲ್ಲಿ ಶೇಕಡಾ 90 % ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಧನದೊಂದಿಗೆ ಪುರಸ್ಕರಿಸಲಾಗುವುದು ಎಂದು ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here