ಕರಾಟೆ- ತೆಂಕಿಲ ವಿವೇಕಾನಂದ ಆ.ಮಾಶಾಲೆಯ ವಿಶಾಲ್.ಪಿ ರಾಜ್ಯ ಮಟ್ಟಕ್ಕೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಮಂಗಳೂರು , ದಕ್ಷಿಣ ವಲಯದ ಕರಾಟೆ ಸ್ಪರ್ಧೆಯು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ, ಮಂಗಳೂರಿನಲ್ಲಿ ಸೆ.9ರಂದು ನಡೆಯಿತು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 4 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಲಕರ ವಿಭಾಗದಲ್ಲಿ (17ರ ವಯೋಮಾನದ) ವಿಶಾಲ್.ಪಿ,10ನೇ ತರಗತಿ [ಶ್ರೀ ವಿಠಲ.ಪಿ ಮತ್ತು ಶ್ರೀಮತಿ ರೇಷ್ಮ ದಂಪತಿ ಪುತ್ರ] ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಪ್ರಮಥ.ಎಮ್.ಭಟ್,10ನೇ ತರಗತಿ [ಶ್ರೀ ರವಿನಾರಾಯಣ.ಎಮ್ ಮತ್ತು ಶ್ರೀಮತಿ ಶರಾವತಿ ದಂಪತಿ ಪುತ್ರ]  ದ್ವಿತೀಯ ಪಡೆದಿರುತ್ತಾನೆ.

ಬಾಲಕಿಯರ ವಿಭಾಗದಲ್ಲಿ [14ರ ವಯೋಮಾನದ)ಅಭಿಜ್ಞಾ ಶಾಂಭವಿ 6ನೇ ತರಗತಿ [ಶ್ರೀ ಸುಧೀರ್‍.ಬಿ ಮತ್ತು ಶ್ರೀಮತಿ ಲತಾ ಸುಧೀರ್ ದಂಪತಿ ಪುತ್ರಿ] ತೃತೀಯ ಸ್ಥಾನ ಪಡೆದಿರುತ್ತಾಳೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here