ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

3,45,24,768 ರೂ. ವ್ಯವಹಾರ, ರೂ, 2,67 ಲಕ್ಷ ನಿವ್ವಳ ಲಾಭ- ಮಮತಾ ಕೆ.ಬಿ.ದೇವಸ್ಯ


ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 3,45,24,768 ರೂ.ಗಳ ವ್ಯವಹಾರವನ್ನು ನಡೆಸಿ, ರೂ 2,67 ಲಕ್ಷ ನಿವ್ವಳ ಲಾಭ ಪಡೆದಿರುತ್ತದೆ ಎಂದು ಸಂಘದ ಅಧ್ಯಕ್ಷೆ ಮಮತಾ ಕೆ.ಬಿ ದೇವಸ್ಯರವರು ಹೇಳಿದರು.
ಅವರು ಸೆ. 14 ರಂದು ಸವಣೂರು ಯುವ ಸಭಾ ಭವನದಲ್ಲಿ ಜರಗಿದ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ ಸಂಘದ ಎಲ್ಲಾ ಸದಸ್ಯರುಗಳು ಮತ್ತು ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ಪ್ರೋತ್ಸಾಹದಿಂದ ಸಂಘವು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, ವರದಿ ಸಾಲಿನಲ್ಲಿ ಸದಸ್ಯರುಗಳಿಗೆ ಶೇ 12 ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದ ಅವರು ಸಂಘವು 38 ನೇ ವರುಷದಲ್ಲಿ ಮುನ್ನಡೆಯುತ್ತಿದ್ದು, ಹೈನುಗಾರರ ನಿರಂತರ ಪ್ರೋತ್ಸಾಹದಿಂದ ಸಂಘವು ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಹೈನುಗಾರರು ಹೆಚ್ಚು ಹೆಚ್ಚು ಹಾಲನ್ನು ಸಂಘಕ್ಕೆ ಪೂರೈಕೆ ಮಾಡುವಲ್ಲಿ ಪ್ರಯತ್ನಿಸಿ, ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವಲ್ಲಿ ಸಹಕರಿಸುವಂತೆ ವಿನಂತಿಸಿದರು

ಪ್ರಗತಿಯ ಹಾದಿಯಲ್ಲಿ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘ- ನಾಗೇಶ್ :
ದ,ಕ.ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್‌ರವರು ಮಾತನಾಡಿ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘವು ಅತ್ಯುತ್ತಮವಾದ ಪ್ರಗತಿಯನ್ನು ಹೊಂದಿರುವುದು ಸಂತೋಷದ ವಿಷಯವಾಗಿದ್ದು, ಹೈನುಗಾರರು 30 ನಿಮಿಷದ ಅವಧಿಯಲ್ಲಿ ಹಾಲನ್ನು ಕರೆದು ಸಂಘಕ್ಕೆ ತಲುಪಿಸಬೇಕು. ಹೆಚ್ಚು ಸಮಯ ಕಳೆದರೆ ಹಾಲಿನ ಗುಣಮಟ್ಟ ಕಡಿಮೆ ಆಗುತ್ತದೆ. ಶುದ್ಧ ಹಾಲು ಪೂರೈಕೆ ಮಾಡುವ ನಿಟ್ಟಿನಲ್ಲಿ ರೈತರು ವಿಶೇಷವಾದ ಕಾಳಜಿಯನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.


ಸವಣೂರು ಹಾಲು ಉತ್ಪಾದಕರ ಸಂಘದ ಪ್ರಗತಿ ಖುಷಿ ತಂದಿದೆ- ಸೀತಾರಾಮ ರೈ :
ದ.ಕ. ಸಹಕಾರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಸಂಘವು ೩೮ ವರ್ಷಗಳಿಂದ ಅತ್ಯುತ್ತಮವಾದ ರೀತಿಯಲ್ಲಿ ನಡೆಯುತ್ತಿದ್ದು, ಸಂಘದ ಕಟ್ಟಡವನ್ನು ನವೀಕರಣಗೊಳಿಸಿದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಅಧ್ಯಕ್ಷೆ ಮಮತಾ ದೇವಸ್ಯ ಮತ್ತು ಆಡಳಿತ ಮಂಡಳಿಯ ನೇತೃತ್ವದಲ್ಲಿ ಉತ್ತಮ ರೀತಿಯಲ್ಲಿ ಸಂಘ ನಡೆಯುತ್ತಿರುವುದು ತುಂಬಾ ಸಂತೋಷ ತಂದಿದೆ.

ಹೆಚ್ಚು ಹಾಲು ಹಾಕಿದವರಿಗೆ ಬಹುಮಾನ:
ವರದಿ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲು ಹಾಕಿದವರಲ್ಲಿ ಪ್ರಥಮ- ಸುದರ್ಶನ್ ನಾಕ್ ಕಂಪ, ದ್ವಿತೀಯ- ಸವಣೂರು ಕೆ.ಸೀತಾರಾಮ ರೈ ಹಾಗೂ ತೃತೀಯ ಯತೀಂದ್ರ ಶೆಟ್ಟಿ ಮಠರವರುಗಳಿಗೆ ಸಂಘದ ವತಿಯಿಂದ ಬಹುಮಾನ ನೀಡಲಾಯಿತು. ಅಲ್ಲದೇ ಸಂಘದ ಎಲ್ಲ ಸದಸ್ಯರುಗಳಿಗೆ ಸ್ಟೀಲ್ ಪಾತ್ರೆಯನ್ನು ನೀಡಲಾಯಿತು.


ಪ್ರತಿಭಾ ಪುರಸ್ಕಾರ:
ಸಂಘದ ವತಿಯಿಂದ ಎಸ್ ಎಸ್ ಎಲ್ ಸಿಯಲ್ಲಿ ಪರೀಕ್ಷೇಯಲ್ಲಿ 501 ಅಂಕ ಪಡೆದ ರೋಶಿನ್ ದೇವಸ್ಯ ರವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಗೌಡ ಆರೇಲ್ತಡಿ, ನಿರ್ದೇಶಕರುಗಳಾದ ಸುಪ್ರೀತ್ ರೈ ಖಂಡಿಗ, ಪ್ರೇಮಚಂದ್ರ ಮೆದು, ದೇವಪ್ಪ ಗೌಡ ಕನಡಕುಮೇರು, ಚೆನ್ನಪ್ಪ ಗೌಡ ಬುಡನಡ್ಕ, ಪ್ರಕಾಶ್ ಕೆ.ಕುದ್ಮನಮಜಲು, ವಿಜಯಲಕ್ಷ್ಮಿ ಕಾಯರ್ಗ, ಪ್ರಜ್ವಲ್ ಕೆ.ಆರ್ ಕೋಡಿಬೈಲು, ಯಶೋಧ ಬಸ್ತಿ, ರವರುಗಳು ಉಪಸ್ಥಿತರಿದ್ದರು
ಸಂಘದ ನಿರ್ದೇಶಕಿ ಆಶಾ ರೈ ಕಲಾಯಿ ಸ್ವಾಗತಿಸಿ, ಕಾರ‍್ಯದರ್ಶಿ ಹರೀಶ್ ವರದಿ ವಾಚಿಸಿ. ವಂದಿಸಿದರು. ನವೋದಯ ಪ್ರೇರಕಿ ಪ್ರೇಮಾ ಆರೇಲ್ತಡಿ ಪ್ರಾರ್ಥನೆಗೈದರು. ನ್ಯಾಯವಾದಿ ಮಹೇಶ್ ಕೆ.ಸವಣೂರು ಕಾರ‍್ಯಕ್ರಮ ನಿರೂಪಿಸಿದರು.


ಸಮಾರಂಭದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸವಣೂರು ಹಾಲು ಉತ್ವಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಹಾಲಿಂಗ ಭಟ್ ಕುಕ್ಕುಜೆ, ಮಾಜಿ ನಿರ್ದೇಶಕರುಗಳಾದ ರತ್ನಾಕರ ಪೂಜಾರಿ ಪೂಜಾರಿ ಅಗರಿ, ಸವಣೂರು ಸಿ.ಎ.ಬ್ಯಾಂಕ್ ಉಪಾದ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕರುಗಳಾದ ಮಹಾಬಲ ಶೆಟ್ಟಿ ಕೊಮ್ಮಂಡ, ಪ್ರಕಾಶ್ ರೈ ಸಾರಕರೆ, ನಿಕಟಪೂರ್ವ ನಿರ್ದೇಶಕ ನಾರಾಯಣ ಗೌಡ ಪೂವ, ಮುಖ್ಯಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಸವಣೂರು ಮಾಸ್ ಸಂಸ್ಥೆಯ ವ್ಯವಸ್ಥಾಪಕ ಯತೀಶ್, ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ, ನಿವೃತ್ತ ಶಿಕ್ಷಕ ಮೋನಪ್ಪ ನಾಯ್ಕ್, ಸವಣೂರು ವಲಯ ರೈತ ಸಂಘದ ಅಧ್ಯಕ್ಷ ಯತೀಂದ್ರ ಶೆಟ್ಟಿ ಮಠ, ಯುವರಾಜ್ ಕಡಂಬ,ಸತೀಶ್ ಶೆಟ್ಟಿ ಕಿನಾರ, ಗಂಗಾಧರ ಸುಣ್ಣಾಜೆ, ರಾಘವ ಗೌಡ ಸವಣೂರು, ಚಂದ್ರಶೇಖರ್ ಮೆದು, ಜಯರಾಮ ರೈ ಸೊಂಪಾಡಿ ಸಹಿತ ಸವಣೂರು ಹಾಲು ಉತ್ಪಾದಕರ ಸಂಘದ ಸದಸ್ಯರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಘದ ಹುಲ್ಲುಗಾವಲು ಮೇಲ್ವಿಚಾರಕ ರಮೇಶ್ ಪಿ, ಹಾಲು ಪರೀಕ್ಷಕಿ ಸುಜಾತ, ಸಹಾಯಕಿ ಶೋಭಾ, ಕೃ,ಗ.ಕಾರ‍್ಯಕರ್ತ ಧನಂಜಯರವರು ಸಹಕರಿಸಿದರು.

ಸವಣೂರು ಹಾ.ಉ.ಸ.ಸಂಘದ ನವೀಕೃತ ಬಿ.ಎಂ.ಸಿ ಕಟ್ಟಡ ಉದ್ಘಾಟನೆ
ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನವೀಕೃತ ಬಿ.ಎಂ.ಸಿ ಕಟ್ಟಡ ಉದ್ಘಾಟನೆಯನ್ನು ಸಂಘದ ಅಧ್ಯಕ್ಷೆ ಮಮತಾ ಕೆ.ಬಿ ದೇವಸ್ಯರವರು ಉದ್ಘಾಟಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ದ.ಕ. ಸಹಕಾರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಗೌಡ ಆರೇಲ್ತಡಿ ಹಾಗೂ ಸಂಘದ ನಿರ್ದೇಶಕರುಗಳು, ಕಾರ‍್ಯದರ್ಶಿ ಹರೀಶ್, ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ, ದ,ಕ.ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್, , ಸವಣೂರು ಸಿ.ಎ.ಬ್ಯಾಂಕ್ ನಿರ್ದೇಶಕ ಪ್ರಕಾಶ್ ರೈ ಸಾರಕರೆ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here