ಉಪ್ಪಿನಂಗಡಿ: ಯುವಕ ನಾಪತ್ತೆ-ದೂರು

0

ಉಪ್ಪಿನಂಗಡಿ: ನೆಲ್ಯಾಡಿ ಗ್ರಾಮದ ಸರೋಳಿಕೆರೆಯ ಯುವಕನೋರ್ವ ನಾಪತ್ತೆಯಾದ ಬಗ್ಗೆ ಆತನ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಿವದಾಸ್ ಎಂಬವರ ಪುತ್ರ ಸುಜೀತ್ ಕುಮಾರ್ (21) ಎಂಬವರೇ ನಾಪತ್ತೆಯಾದ ಯುವಕ. ಇವರು ಸೆ.15ರಂದು ರಾತ್ರಿ 9ರಿಂದ ಸೆ.16ರಂದು ನಸುಕಿನ ಜಾವ 3.3೦ರ ಅವಧಿಯಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾರೆ. ಹಿಂದಿ, ಕನ್ನಡ, ಮಲಯಾಳಂ ಹಾಗೂ ತುಳು ಮಾತನಾಡುತ್ತಾರೆ ಎಂದು ಈತನ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here