ಕಸಾಪ ಪುತ್ತೂರು -ರೋಟರಿಕ್ಲಬ್ ಉಪ್ಪಿನಂಗಡಿ ವತಿಯಿಂದ ಭಾಷಣ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ

0

ಪುತ್ತೂರು: ಕಸಾಪ ಪುತ್ತೂರು ನೇತೃತ್ವದಲ್ಲಿ ರೋಟರಿ ಕ್ಲಬ್ ಉಪ್ಪಿನಂಗಡಿ ಸಂಚಾಲಕತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಅ.1ರಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಎರಡೂ ಸ್ಪರ್ಧೆಯು ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗ ಮತ್ತು ಸಾರ್ವಜನಿಕ ವಿಭಾಗದಲ್ಲಿ ನಡೆಯಲಿದೆ. ವಿಜೇತರಿಗೆ ಅದೇ ದಿನ ಮಧ್ಯಾಹ್ನ 3:00 ಗಂಟೆಗೆ ಪ್ರಥಮ ದ್ವಿತೀಯ ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಗುವುದು.

ನಿಯಮಗಳು :
ಮೂರು ನಿಮಿಷದ ಕಾಲಾವಕಾಶ, ಸ್ಪರ್ಧೆಯ ವಿಷಯ ಗಾಂಧಿ ಜಯಂತಿ/ಸ್ವಾತಂತ್ರ್ಯ/ ದೇಶಭಕ್ತಿ ಯಾವುದೇ ವಿಷಯವನ್ನು ಆಯ್ಕೆ ಮಾಡಬಹುದು,ದೇಶಭಕ್ತಿ ಗೀತೆಗೆ ಕರೋಕೆ ಬಳಸಲು ಅವಕಾಶವಿಲ್ಲ, ಸಮೂಹ ಗೀತೆಗೆ ಅವಕಾಶವಿಲ್ಲ, ಜಾತಿ, ಮತ, ಧರ್ಮ ನಿಂದನೆಗೆ ಹಾಗೂ ರಾಜಕೀಯ ವಿಷಯಗಳಿಗೆ ಅವಕಾಶ ಇಲ್ಲ. ಪುತ್ತೂರು ತಾಲೂಕಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಹಾಗೂ ಪುತ್ತೂರು ತಾಲೂಕಿನ ನಿವಾಸಿಗಳು, ಉದ್ಯೋಗಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನೊಂದಣಿ ಮಾಡಲು ಕೊನೆಯ ದಿನಾಂಕ 25-09-2023. ಆಸಕ್ತರು ಕಾರ್ಯಕ್ರಮದ ಸಂಯೋಜರಕರಾದ ನವೀನ್ ಬ್ರ್ಯಾಗ್ಸ್ ಅವರ ದೂರವಾಣಿ ಸಂಖ್ಯೆ 9591168205 ಅಥವಾ ಕಸಾಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ದೂರವಾಣಿ ಸಂಖ್ಯೆ 9844401295 ಗೆ ತಮ್ಮ ಹೆಸರು, ಸ್ಪರ್ಧಾ ವಿಭಾಗ, ಸ್ಪರ್ಧೆಯ ವಿಷಯ, ತಮ್ಮ ದೂರವಾಣಿ ಸಂಖ್ಯೆಗಳನ್ನು ವಾಟ್ಸಪ್ ಮಾಡಬೇಕಾಗಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here