ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಧ್ವನಿ ವರ್ಧಕ ಸೆಟ್ ಕೊಡುಗೆ

0

ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ನಡೆದ ವರಮಹಾಲಕ್ಮ್ಮೀ ಪೂಜಾ ಕಾರ್ಯಕ್ರಮದ ಉಳಿಕೆ ಮೊತ್ತ ರೂ 74 ಸಾವಿರದಲ್ಲಿ ದೇವಾಲಯಕ್ಕೆ ಅಗತ್ಯವಿರುವ ಧ್ವನಿ ವರ್ಧಕ ಸೆಟ್ ನ್ನು ಕೊಡುಗೆಯಾಗಿ ನೀಡಲಾಯಿತು. ಪೂಜಾ ಸಮಿತಿ ಅಧ್ಯಕ್ಷೆ ಸವಿತಾ ಗೆಜ್ಜೆಗಿರಿ ಮತ್ತು ತಂಡ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ರವರಿಗೆ  ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಮಹಾಲಿಂಗ ಭಟ್, ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ,  ಸಮಿತಿ ಕಾರ್ಯದರ್ಶಿಯಾಗಿ ಸುನೀತಾ ಮೇಗಿನಮನೆ,  ಕೋಶಾಧಿಕಾರಿ ಶಂಕರಿ ಪಟ್ಟೆ, ಜತೆ ಕಾರ್ಯದರ್ಶಿಯಾಗಿ ಸುಜಾತ ಮೈಂದನಡ್ಕ, ಸುಶೀಲಾ ಪಕ್ಯೋಡ್, ವಿನೋದ ಸೇನೆರಮಜಲು, ರೇಖಾ ನಾಗರಾಜ್ ಪಟ್ಟೆ, ಪ್ರೇಮ ಮೈಂದನಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here