ದೇವತಾ ಸಮಿತಿಯ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿಯವರ ಉತ್ತರ ಕ್ರಿಯೆ – ಶ್ರದ್ಧಾಂಜಲಿ

0

ಪುತ್ತೂರು: ಕಿಲ್ಲೆ ಮೈದಾನದ ಸಾರ್ವಜನಿಕ ಮಹಾಗಣೇಶೋತ್ಸವದ ರೂವಾರಿ ದೇವತಾ ಸಮಿತಿ ಅಧ್ಯಕ್ಷ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ಭಂಡಾರದ ಮನೆ ಮೂಡುಶೆಡ್ಡೆ ಎನ್.ಸುಧಾಕರ್ ಶೆಟ್ಟಿಯವರ ಉತ್ತರ ಕ್ರಿಯೆ ಸೆ.21ರಂದು ಪುತ್ತೂರು ಕೊಂಬೆಟ್ಟು ಸುಂದರಾಮ ಶೆಟ್ಟಿ ಸ್ಮರಕ ಬಂಟರ ಭವನದಲ್ಲಿ ನಡೆಯಿತು.


ಕಳೆದ 44 ವರ್ಷಗಳಿಂದ ದೇವತಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಎನ್.ಸುಧಾಕರ್ ಶೆಟ್ಟಿಯವರು ಸೆ.10ರಂದು ನಿಧನರಾಗಿದ್ದು ಸೆ.21 ರಂದು ನಡೆದ ಅವರ ಉತ್ತರ ಕ್ರೀಯೆ ಸದ್ಗತಿ ಕಾರ್ಯದಲ್ಲಿ ಶ್ರದ್ದಾಂಜಲಿ ಸಮರ್ಪಣೆ ನಡೆಯಿತು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಡಾ. ರಾಜೇಶ್ ಬೆಜ್ಜಂಗಳ, ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ನುಡಿನಮನ ಸಲ್ಲಿಸಿದರು. ಈ ಸಂದರ್ಭ ಹಲವಾರು ಮಂದಿ ಗಣ್ಯರು ಬಂದುಗಳು, ಸ್ನೇಹಿತರು ಅಗಮಿಸಿ ಸುಧಾಕರ್ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಪತ್ನಿ ಗೀತಾ, ಪುತ್ರರಾದ ಅಭಿಷೇಕ್ ಮತ್ತು ಅಭಿಜಿತ್, ಸಹೋದರ ದಿನಕರ ಶೆಟ್ಟಿ, ಪ್ರೇಮ ಉಪಸ್ಥಿತರಿದ್ದರು. ನಿವೃತ್ತ ಪ್ರಾಧ್ಯಾಪಕ ಸುರೇಶ್ ಶೆಟ್ಟಿ ಕಾರ್ಯಕ್ರಮ‌ ನಿರ್ವಹಿಸಿದರು. ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ ವಿವಿಧ ಕಾರ್ಯಕ್ರಮ‌ನಿರ್ವಹಿಸಿದರು.

LEAVE A REPLY

Please enter your comment!
Please enter your name here