ಸೆ.24: ಕೊಯಿಲ ಸದಾಶಿವ ದೇವಸ್ಥಾನದಲ್ಲಿ ಎಸ್.ಪಿ.ವೈ.ಎಸ್.ಎಸ್ ವತಿಯಿಂದ ಉಚಿತ ಯೋಗ ಶಿಕ್ಷಣ

0

ಆಲಂಕಾರು:ಸಂಸ್ಕಾರ ,ಸಂಘಟನೆ ಸೇವೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ .ರಿ. ಕರ್ನಾಟಕ. ದ.ಕ ಜಿಲ್ಲೆ ಇದರ ವತಿಯಿಂದ 21 ದಿನಗಳ ಉಚಿತ ಯೋಗ ಸ್ಪರ್ಶ ತರಗತಿ.
ಶ್ರೀ ಸದಾಶಿವ ದೇವಸ್ಥಾನ ಕೊಯಿಲಾ ಇದರ ಸಭಾಂಗಣದಲ್ಲಿ ಸೆ.24 ರಂದು ಬೆಳಿಗ್ಗೆ 6 ಗಂಟೆಗೆ ಉದ್ಘಾಟನೆಗೊಳ್ಳಲಿದೆ.ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿಯು ಸಂಸ್ಕಾರ ಸಂಘಟನೆ – ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ಕಳೆದ 43 ವರ್ಷಗಳಿಂದ ಸಮಿತಿಯ ಪ್ರಧಾನ ಸಂಚಾಲಕರಾದ ಅ.ರಾ.ರಾಮಸ್ವಾಮಿ ಅಣ್ಣನವರ ಮಾರ್ಗದರ್ಶನದಲ್ಲಿ ನುರಿತ ಯೋಗಶಿಕ್ಷಕರಿಂದ ಸಂಪೂರ್ಣ ಉಚಿತವಾಗಿ ಕರ್ನಾಟಕ ಕೇಂದ್ರವಾಗಿರಿಸಿಕೊಂಡು ವಿವಿಧ ರಾಜ್ಯ, ಹೊರರಾಷ್ಟ್ರಗಳಲ್ಲಿ ನಿತ್ಯ ಸಾವಿರಾರು ಶಾಖೆಗಳ ಮೂಲಕ ಲಕ್ಷಾಂತರ ಜನರಿಗೆ
ಯೋಗದ ಮೂಲಕ ಸಂಸ್ಕಾರಯುತ ಜೀವನ ಶೈಲಿಯನ್ನು ಕಲಿಸುತ್ತಿದೆ.

ಮಂಗಳೂರಿನಲ್ಲಿ 200 ಕ್ಕೂ ಹೆಚ್ಚುಶಾಖೆ ಹಾಗೂ ಪುತ್ತೂರಿನಲ್ಲಿ 15 ಶಾಖೆ ಉಪ್ಪಿನಂಗಡಿಯಲ್ಲಿ 2 , ಅಲಂಕಾರಿನಲ್ಲಿ 1 ಶಾಖೆಗಳ ಮೂಲಕ ಸಾವಿರಾರು ಜನರಿಗೆ ಯೋಗ ಶಿಕ್ಷಣದ ಜೊತೆಗೆ ಆರೋಗ್ಯ,ಧನಾತ್ಮಕ ಚಿಂತನೆ,ಕ್ರಿಯಾಶೀಲ ವ್ಯಕ್ತಿತ್ವ, ಆದರ್ಶ ಕುಟುಂಬದ ತರಬೇತಿ ನೀಡುತ್ತಾ ಸಮಾಜದಲ್ಲಿ ಉತ್ತಮವಾದ ಪರಿವರ್ತನೆಗೆ ಕಾರಣವಾಗಿದೆ. ಇದೀಗ ಕೊಯಿಲಾಪರಿಸರದ ಬಹುಜನರ ಅಪೇಕ್ಷೆ ಯಂತೆ ಶ್ರೀ ಸದಾಶಿವ ದೇವಸ್ಥಾನ ಕೊಯಿಲಾ ಇದರ ಸಭಾಂಗಣದಲ್ಲಿ ಬೆಳಗ್ಗೆ 5 ರಿಂದ 6:30 ರ ತನಕ ಹೊಸ ಯೋಗತರಗತಿ
ಈ ತರಗತಿಯಲ್ಲಿ ಭಾಗವಹಿಸಲಿಚ್ಚಿಸುವ ಬಂಧುಗಳು ಸಂಘಟಕರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here