ಭಾರತ್ ಒನ್ ಸೌಹಾರ್ದ ಸಹಕಾರಿ ಮಹಾಸಭೆ

0

ಪುತ್ತೂರು : ಇಲ್ಲಿನ ಎಪಿಎಂಸಿ ರಸ್ತೆ ಅಕ್ಷಯ ಟವರ್ ಇದರ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಒನ್ ಸೌಹಾರ್ದ ಸಹಕಾರಿ ಸಂಘ ಇದರ ದ್ವಿತೀಯ ವಾರ್ಷಿಕ ಮಹಾಸಭೆಯು ಸೆ.23ರಂದು ಸಹಕಾರಿಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾದ್ಯಕ್ಷತೆಯನ್ನು ರವಿಪ್ರಸಾದ್ ರೈ ವಹಿಸಿ, ಸಂಸ್ಥೆಯ ಮುಂದಿನ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ಅಕ್ಷಯ ಟವರ್ ಮಾಲೀಕ ಶಿವಪ್ರಸಾದ್ ಭಟ್, ಪದಾಧಿಕಾರಿಗಳಾದ ಉಷಾ ಶೆಟ್ಟಿ, ಸಾವಿತ್ರಿ, ಹರಿಣಿ, ಕಲ್ಪನಾ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂದೀಪ್ ರವರು ವರದಿ ವಾಚಿಸಿದರು.
ಸಂಸ್ಥೆಯ ಸಿಬ್ಬಂದಿ ಕು. ಪವಿತ್ರ ಸ್ವಾಗತಿಸಿ, ಸಹಾಯಕ ವ್ಯವಸ್ಥಾಪಕರಾದ ರವಿಚಂದ್ರ ಶೆಟ್ಟಿ ಯವರು ಆಹ್ವಾನ ಪತ್ರಿಕೆಯನ್ನು ವಾಚಿಸಿದರು. ಜಯಮಾಲಾ ವಂದಿಸಿ, ಸುಬ್ರಮಣ್ಯ ಸಾಲಿಯಾನ್ ಇವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here