ಪುತ್ತೂರ್‍ದ ಪಿಲಿರಂಗ್ ಸೀಸನ್-2 ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಅ.22ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯುವ ಪುತ್ತೂರ್‍ದ ಪಿಲಿರಂಗ್ ಸೀಸನ್-2 ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭವು
ಸೆ .25ರಂದು ಪುತ್ತೂರು ಶ್ರೀ ಮ ಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್‌ರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುತ್ತೂರ್ದ ಪಿಲಿರಂಗ್ ಸೀಸನ್-2 ಸಮಿತಿಯ ವಿವಿಧ ಪದಾಧಿಕಾರಿಗಳಾದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಎನ್. ಚಂದ್ರಹಾಸ ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್, ಶಿವರಾಮ ಆಳ್ವ ಕುರಿಯ, ಎ ಕೆ ಜಯರಮ ರೈ, ಜೋಕಿಮ್ ಡಿ ಸೋಜಾ, ಸುರೇಂದ್ರ ರೈ, ಜಯಪ್ರಕಾಶ್ ಬದಿನಾರು, ರೋಷನ್ ರೈ ಬನ್ನೂರು, ಶಾರದಾ ಅರಸು, ಕೃಷ್ಣಪ್ರಸಾದ್ ಆಳ್ವ, ಸುದೇಶ್ ಕುಮಾರ್, ರಂಜಿತ್ ಬಂಗೇರ, ಪ್ರಜ್ವಲ್ ರೈತೋಟ್ಲ, ದಯಾನಂದ ರೈ, ಶರತ್ ಕೇಪುಳು, ಲೋಕೇಶ್ ಪಡ್ಡಾಯೂರು, ಶಿವನಾಥ ರೈ ಮೇಗಿನಗುತ್ತು, ನಿಹಾಲ್ ರೈ, ರಿತೇಶ್ ಶೆಟ್ಟಿ, ರಾಕೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here