![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕಲಿಯುಗ ಕಲೆ,ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಸೆ.24ರಂದು ಮಧ್ಯಾಹ್ನ ದೈವಗಳಿಗೆ ಹಗಲು ಕೋಲ,ಅಗೇಲು ಸೇವೆ ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ಮಧ್ಯಾಹ್ನ 12 ಗಂಟೆಯಿಂದ ಕೆಂಡದರ್ಶನ ಸೇವೆ, ಅಗ್ನಿ ಕಲ್ಲುರ್ಟಿ ಮತ್ತು ಸ್ವಾಮಿ ಕೊರಗಜ್ಜ ದೈವಕ್ಕೆ ಕೋಲ, ಅಗೇಲು ಸೇವೆ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ಪ್ರತಿ ಆದಿತ್ಯವಾರ ಮಧ್ಯಾಹ್ನ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ, ಅಗೇಲು ಸೇವೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ಪ್ರತಿ ಸೋಮವಾರ,ಮಂಗಳವಾರ,ಶುಕ್ರವಾರ ಮತ್ತು ಶನಿವಾರ ಪ್ರಶ್ನಾ ಚಿಂತನೆ ಹಾಗೂ ಬುಧವಾರ, ಗುರುವಾರ ಸೂಚಿತ ಪರಿಹಾರ ಕಾರ್ಯ ನಡೆಯುತ್ತದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.
![](https://puttur.suddinews.com/wp-content/uploads/2023/09/47.jpg)
ಸಾವಿರದ ಹರಕೆ ಕೋಲ ಸ್ವೀಕರಿಸಿದ ಕೊರಗಜ್ಜ
ಸೆ.24ರಂದು ಮಜಲು ಕ್ಷೇತ್ರದ ಸ್ವಾಮಿ ಕೊರಗಜ್ಜನಿಗೆ ಒಂದು ಸಾವಿರನೆ ಹರಕೆ ಕೋಲದ ಸಂಭ್ರಮ ನಡೆಯಿತು.ಹಿಂದೆ ಹಿರಿಯರ ಕಾಲದಲ್ಲಿ ಕಟ್ಟುಕಟ್ಟಲೆಯಂತೆ ಕಲಾಯಿ ಸೇವೆ, ಅಗೇಲು ಸೇವೆ ನಡೆಯುತ್ತಿತ್ತು.೨೦೦೮ರಿಂದ ನಿರಂತರವಾಗಿ ಪ್ರತಿ ಸಂಕ್ರಮಣದಂದು ಮತ್ತು ಕಳೆದ ಕೆಲವು ವರ್ಷಗಳಿಂದ ಪ್ರತಿ ಆದಿತ್ಯವಾರವೂ ಸ್ವಾಮಿ ಕೊರಗಜ್ಜನಿಗೆ ಕ್ಷೇತ್ರದಲ್ಲಿ ಕೋಲ ನಡೆಯುತ್ತಿದ್ದು ಸಾವಿರಾರು ಭಕ್ತಾದಿಗಳ ಅಗೇಲು ಸೇವೆಯೂ ನಡೆದಿದೆ.ಸೆ.24ರಂದು ಸ್ವಾಮಿ ಕೊರಗಜ್ಜ ಸಾವಿರದ ಹರಕೆ ಕೋಲ ಸ್ವೀಕರಿಸಿದರು.
ಮಣಿಸ್ವಾಮಿ, ಕ್ಷೇತ್ರದ ಧರ್ಮದರ್ಶಿ