ಪುತ್ತೂರು ಶಾರದೋತ್ಸವ: ವಿಗ್ರಹ ಮುಹೂರ್ತ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಹಲವಾರು ವರ್ಷಗಳಿಂದ ಭಕ್ತಾದಿಗಳ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿರುವ ನವರಾತ್ರಿ ಉತ್ಸವ, ಶಾರದಾ ವಿಗ್ರಹ ಪ್ರತಿಷ್ಠೆ, ಶೋಭಾಯಾತ್ರೆಯು ಈ ವರ್ಷ ಅದ್ದೂರಿಯಾಗಿ ನೆರವೇರಲಿದ್ದು ಆ ಕುರಿತಂತೆ ಶಾರದೆ ವಿಗ್ರಹ ಮುಹೂರ್ತವು ಸೆ.28ರಂದು ಪ್ರಭು ಸ್ಟುಡಿಯೋ ಮಾಲಕ ಶ್ರೀನಿವಾಸ ಪ್ರಭುರವರ ನಿವಾಸದ ಬಳಿ ನಡೆಯಿತು.
ಆರಂಭದಲ್ಲಿ ಸಮಿತಿ ಪದಾಧಿಕಾರಿಗಳು ಮಹಾಲಿಂಗೇಶ್ವರ ದೇವರ ಸನಿಧಿಯಲ್ಲಿ, ಶಾರದಾ ಭಜನಾ ಮಂದಿರದಲ್ಲಿ ಪ್ರಾರ್ಥಿಸಿ ಬಳಿಕ ಉಳ್ಳಾಲ್ತಿ ಕಟ್ಟೆ ಬಳಿ ಇರುವ ಪ್ರಭು ಸ್ಟುಡಿಯೋರವರ ನಿವಾಸದ ಬಳಿ ವಿಗ್ರಹ ಮುಹೂರ್ತ ಪೂಜೆ ನೆರವೇರಿಸಿದರು.
ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಶೋಭಾಯಾತ್ರೆ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಸಮಿತಿ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಜತೆ ಕಾರ್ಯದರ್ಶಿ ಗೋಪಾಲಕೃಷ್ಣ ಈಶಾ, ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ತಾರನಾಥ್ ಹೆಚ್, ಸುಧೀರ್, ಜಯಕಿರಣ್, ಉದಯ ಹೆಚ್., ಪಕೀರ ಗೌಡ, ಹೆಚ್. ವಿಜಯಾ, ಕೃಷ್ಣ ಪಿ.ಜಿ., ಗಣೇಶ್, ವಸಂತ್, ಗೋಪಾಲ ಆಚಾರ್ಯ, ಗುಲಾಬಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here