ಬೊಳುವಾರು ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ಅಂಗವಾಗಿ ವಿಶೇಷ ದುರ್ಗಾಪೂಜೆ

0


ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಕ್ಷೇತ್ರದ ಕುರಿತು ಈ ಹಿಂದೆ ಜರಗಿದ ಪ್ರಶ್ನಾಚಿಂತನೆಯ ಪರಿಹಾರ ಅಂಗವಾಗಿ ಸೆ.27ರಂದು ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯಿತು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು, ವೇದಮೂರ್ತಿ ಶ್ರೀಧರ್ ಭಟ್ ಕಬಕ ಪೌರೋಹಿತ್ಯದಲ್ಲಿ ಬೆಳಿಗ್ಗೆ ದೇವರಿಗೆ ಪ್ರಾರ್ಥನೆ, ಗಣಪತಿ ಹೋಮ ನಡೆದು ನಾಗದೇವರಿಗೆ ತಂಬಿಲ, ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಸಂಜೆ ಕ್ಷೇತ್ರದ ಭಜನಾ ಸೇವಾ ತಂಡದಿಂದ ಭಜನಾ ಸಂಕೀರ್ತನೆ, ರಾತ್ರಿ ವಿಶೇಷ ದುರ್ಗಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್, ಅರ್ಚಕ ಶಂಕರನಾರಾಯಣ್ ಭಟ್, ಕ್ಷೇತ್ರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್ ಬೊಳುವಾರು, ಪ್ರಧಾನ ಕಾರ್ಯದರ್ಶಿ ವಿ.ಕೆ.ಶೆಟ್ಟಿ, ಕೋಶಾಧಿಕಾರಿ ಪ್ರಸನ್ನ ಬಲ್ಲಾಳ್, ಟ್ರಸ್ಟಿಗಳಾದ ಮನೋಹರ್ ರೈ, ದಿನೇಶ್ ಗೌಡ ಕರ್ಮಲ, ಪುಷಲತಾ ಬಿ. ಪೂಜಾರಿ, ಜಲಜಾಕ್ಷಿ ಎನ್ ಹೆಗ್ಡೆ, ನಗರಸಭೆ ಸದಸ್ಯ ಸಂತೋಷ್‌ಕುಮಾರ್ ಬೊಳುವಾರು ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here