![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಮಹಾಲಿಂಗ ಅಂದರೆ ತ್ರಿಮೂರ್ತಿಗಳ ಸಂಗಮ-ಶ್ರೀ ಪಿ.ಜಿ. ಜಗನ್ನಿವಾಸ ರಾವ್.
ಪುತ್ತೂರು: “ಅರ್ಚಕಸ್ಯ ಪ್ರಭಾವೇಣ ಶಿಲಾ ಭವತಿ ಶಂಕರ:” ಅಂದರೆ,ಅರ್ಚಕನ ಪ್ರಭಾವ ಮತ್ತು ಸಂಸ್ಕಾರದಿಂದ ಶಿಲೆಯಾದ ಮೂರ್ತಿ ಶಂಕರನಾಗುತ್ತದೆ ಅಂದರೆ ದೇವರ ಸ್ವರೂಪ ಪಡೆಯುತ್ತದೆ. ಇಲ್ಲಿ ಅರ್ಚಕನೆಂದರೆ ಯಾರೆಲ್ಲಾ ತ್ರಿಕರಣ ಪೂರ್ವಕವಾಗಿ ಶಿಲೆಯಲ್ಲಿ ದೇವರನ್ನು ಏಕನಿಷ್ಠೆಯಿಂದ ಕಾಣುತ್ತಾರೋ ಆ ಭಕ್ತರೆಲ್ಲರೂ ಒಂದು ರೀತಿಯಿಂದ ಅರ್ಚಕರೇ ಆಗುತ್ತಾರೆ. ಭಗವಂತನನ್ನು ತ್ರಿಕರಣಪೂರ್ವಕವಾಗಿ ಭಜಿಸಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಪುತ್ತೂರು ನಗರಸಭಾ ಸದಸ್ಯ, ಸಮಾಜ ಸೇವಕ, ಧಾರ್ಮಿಕ ಚಿಂತಕ ಪಿ.ಜಿ.ಜಗನ್ನಿವಾಸ ರಾವ್ ಹೇಳಿದರು.
![](https://puttur.suddinews.com/wp-content/uploads/2023/09/aec19e6f-752a-4243-bec3-f0361ab65151.jpg)
ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಇದರ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಹಾಲಿಂಗನೆಂದರೆ ಬ್ರಹ್ಮ, ವಿಷ್ಣು , ಮಹೇಶ್ವರರ ಸಂಗಮ. ವೇದ, ಆಗಮ ಶಾಸ್ತ್ರಗಳಲ್ಲಿ ಹೇಳಲ್ಪಟ್ಟ ಪ್ರದಕ್ಷಿಣಾ ಪದ್ದತಿ, ಶಿವನ ಸನ್ನಿಧಿಯಲ್ಲಿರುವ ಇತರ ದೇವ ಸಾನ್ನಿಧ್ಯಗಳ ಮಹತ್ವವನ್ನು ವಿಶದೀಕರಿಸಿ, ಟ್ರಸ್ಟ್ ನ ಚಟುವಟಿಕೆಗಳು ಹತ್ತೂರಿಗೆ ಪಸರಿಸಲಿ ಎಂದು ಶುಭ ಹಾರೈಸಿದರು.
![](https://puttur.suddinews.com/wp-content/uploads/2023/09/8f412bbf-9598-4569-a6c9-673dfe1816da.jpg)
ಸಂಚಾಲಕ ಗೋಪಾಲಕೃಷ್ಣ ಮಾತನಾಡಿ ಟ್ರಸ್ಟ್ ನ ರೂಪುರೇಶೆಗಳನ್ನು ವಿವರಿಸಿ, ಭಜನೆಯ ಜೊತೆಗೆ ಪರಸ್ಪರ ಹೊಂದಾಣಿಕೆ, ಸಹಕಾರದೊಂದಿಗೆ ಟ್ರಸ್ಟ್ ನ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ ಎಂದರು. ಗೌರವಾಧ್ಯಕ್ಷ ಪಕೀರ ಗೌಡ, ಭಾರತಿ ನೂತನ ಸದಸ್ಯ ನೇಮಿರಾಜ್ ತಮ್ಮ ಅನಿಸಿಕೆ ಹಂಚಿಕೊಡರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ನಿಕಟ ಪೂರ್ವಾಧ್ಯಕ್ಷ ಜಗನ್ನಾಥ ಪೂಜಾರಿ ಭಜನೆಯೊಂದಿಗೆ ಸೇವಾ ಮನೋಭಾವ ಮೈಗೂಡಿಸಿಕೊಂಡು ಟ್ರಸ್ಟ್ ನ ಕೀರ್ತಿಪತಾಕೆಯನ್ನು ಇನ್ನಷ್ಟು ಎತ್ತರಕ್ಕೇರಿಸಲು ಕೈಜೋಡಿಸುವ ಸಲಹೆ ನೀಡಿದರು. ಟ್ರಸ್ಟ್ ನ ಕೋಶಾಧಿಕಾರಿ ಧನುಷಾ ಪ್ರಾರ್ಥಿಸಿದರು. ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಭಾವತಿ ವಂದಿಸಿದರು. ನೂತನಾಧ್ಯಕ್ಷೆ ಶಾರದಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.