ವಿದ್ಯಾ ಭಾರತಿ ರಾಜ್ಯ ಮಟ್ಟದ ಕ್ರೀಡಾಕೂಟ: ವಿವೇಕಾನಂದ ಆ.ಮಾ. ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವು ದಿನಾಂಕ 14, 15, 16, ಸೆಪ್ಟೆಂಬರ್ 2023 ರಂದು ಮಂಡ್ಯದ ಕರೆಗೋಡು ಇಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಬಾಲವರ್ಗದ ಬಾಲಕರ ವಿಭಾಗದಲ್ಲಿ: ಚೇತಸ್ ಪಿ ವೈ 8ನೇ ತರಗತಿ 600 ಮೀ ಓಟದಲ್ಲಿ ಚಿನ್ನದ ಪದಕ, 400ಮೀ ಓಟದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ.

ಬಾಲ ವರ್ಗದ ಬಾಲಕಿಯರ ವಿಭಾಗದಲ್ಲಿ: ದಿವಿಜ್ಞಾ ಯು.ಎಸ್ (8ನೇ) 200 ಮೀ ಓಟದಲ್ಲಿ ಚಿನ್ನದ ಪದಕ 400 ಮೀ ಓಟದಲ್ಲಿ ಚಿನ್ನದ ಪದಕ ಹಾಗೂ 600 ಮೀ ಓಟದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಹಾಗೂ ಈ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿರುತ್ತಾರೆ. ಸಾನ್ವಿ.ಜೆ. (7ನೇ) ಗುಂಡು ಎಸೆತದಲ್ಲಿ ಬೆಳ್ಳಿ ಪದಕ ಪಡೆದು, ಚಿಂತನಾ ಸಿ (8ನೇ) 80 ಮೀ ಅಡೆ ತಡೆ ಓಟದಲ್ಲಿ ಬೆಳ್ಳಿ ಪದಕ, ನಿಧಿಶ್ರೀ (7ನೇ) 100ಮೀ ಓಟದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.

ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ: ಸಚಿತ್.ಪಿ.ಕೆ 800 ಮೀ ಓಟದಲ್ಲಿ ಚಿನ್ನದ ಪದಕ 400 ಮೀ ಓಟದಲ್ಲಿ ಬೆಳ್ಳಿ ಪದಕ ಹಾಗೂ 4*400 ಮೀ ಓಟದಲ್ಲಿ ಚಿನ್ನದ ಪದಕ, ಅರಿಬ್ ರಯಾನ್ (10ನೇ) ಹ್ಯಾಮರ್ ಎಸೆತದಲ್ಲಿ ಚಿನ್ನದ ಪದಕ, ಮಿಲನ್ (10ನೇ) ಗುಂಡು ಎಸೆತದಲ್ಲಿ ಚಿನ್ನದ ಪದಕ ಮತ್ತು ಸಾತ್ವಿಕ್ ಆರ್ 110 ಮೀ ಅಡೆ ತಡೆ ಓಟದಲ್ಲಿ ಬೆಳ್ಳಿ ಪದಕ, ಹಾರ್ದಿಕ್.ಪಿ.ಕೆ  (10ನೇ) ತರಗತಿ 5ಕೀ.ಮೀ ನಡಿಗೆಯಲ್ಲಿ ಬೆಳ್ಳಿ ಪದಕ, ಮನ್ವಿತ್ ನೆಕ್ಕರೆ (9ನೇ) 110ಮೀ ಅಡೆ ತಡೆ ಓಟದಲ್ಲಿ ಕಂಚಿನ ಪದಕ, ಯಶ್ವಿತ್ ಡಿ. ಪಿ. (10ನೇ) ಎತ್ತರ ಜಿಗಿತದಲ್ಲಿ ಕಂಚಿನ ಪದಕ ಮತ್ತು ಕೃಪಾಲ್ ಕೆ (9ನೇ) 4*100 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ಕಿಶೋರ ವರ್ಗದ ಬಾಲಕರ 4*100 ರಿಲೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ: ಕೃತಿ. ಕೆ. (9ನೇ) 800 ಮೀ ಓಟದಲ್ಲಿ ಚಿನ್ನದ ಪದಕ, 1500 ಮೀ ಓಟದಲ್ಲಿ ಚಿನ್ನದ ಪದಕ ಹಾಗೂ 3000 ಮೀ ಓಟದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಹಾಗೂ ಈ ವಿಭಾಗದ ವೈಯಕ್ತಿಕ ಚಾಂಪಿಯನ್ ಆಗಿರುತ್ತಾರೆ.

ಡಿಂಪಲ್ ಶೆಟ್ಟಿ (9ನೇ) 400 ಮೀ ಓಟದಲ್ಲಿ ಚಿನ್ನದ ಪದಕ, 200 ಮೀ ಓಟದಲ್ಲಿ ಬೆಳ್ಳಿ ಪದಕ ಹಾಗೂ 100 ಮೀ ಓಟದಲ್ಲಿ ಬೆಳ್ಳಿ ಪದಕ, ಅಮೃತ ಬಿ.ಎ. (9ನೇ) 1500 ಮೀ ಓಟದಲ್ಲಿ ಬೆಳ್ಳಿ ಪದಕ ಹಾಗೂ 3000 ಮೀ ಓಟದಲ್ಲಿ ಬೆಳ್ಳಿ ಪದಕ ಹಾಗೂ 400 ಮೀ ಅಡೆ ತಡೆ ಓಟದಲ್ಲಿ ಕಂಚಿನ ಪದಕ ಪಡೆದಿದ್ದು, ಶ್ರೀವರ್ಣ ಪಿ ಡಿ ತ್ರಿವಿಧ ಜಿಗಿತದಲ್ಲಿ ಕಂಚಿನ ಪದಕ ಹಾಗೂ 100 .ಮೀ ಅಡೆ ತಡೆ ಓಟದಲ್ಲಿ ಕಂಚಿನ ಪದಕವನ್ನೂ, ಸಮೃದ್ಧಿ ಜೆ .ಶೆಟ್ಟಿ (10ನೇ)100 ಮೀ ಅಡೆ ತಡೆ ಓಟದಲ್ಲಿ ಚಿನ್ನದ ಪದಕ ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಹಾಗೂ ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ

ಸಾನ್ವಿ ಎಸ್.ಪಿ (10ನೇ) ತ್ರಿವಿಧ ಜಿಗಿತದಲ್ಲಿ ಚಿನ್ನದ ಪದಕ ಉದ್ದ ಜಿಗಿತದಲ್ಲಿ ಕಂಚಿನ ಪದಕ ಮತ್ತು 100 ಮೀ ಓಟದಲ್ಲಿ ಕಂಚಿನ ಪದಕ, ಎಂ ಪವಿತ್ರ (10ನೇ) ಹ್ಯಾಮರ್ ಎಸೆತದಲ್ಲಿ ಚಿನ್ನದ ಪದಕ, ಈಟಿ ಎಸೆತದಲ್ಲಿ ಕಂಚಿನ ಪದಕ, ರಿದ್ಧಿ ಸಿ ಶೆಟ್ಟಿ (10ನೇ) 400 ಮೀ ಓಟದಲ್ಲಿ ಬೆಳ್ಳಿ ಪದಕ ಹಾಗೂ ಅಡೆ ತಡೆ ಓಟದಲ್ಲಿ ಬೆಳ್ಳಿ ಪದಕ ಹಾಗೂ 800 ಮೀ ಓಟದಲ್ಲಿ ಕಂಚಿನ ಪದಕ, ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ 4*100 ಮೀ  ಮತ್ತು 4*400 ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ.
16 ವಿಧ್ಯಾರ್ಥಿಗಳು ಹೈದರಾಬಾದ್ ನಲ್ಲಿ ನಡೆಯುವ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆಂದು ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ತಿಳಿಸಿರುತ್ತಾರೆ

LEAVE A REPLY

Please enter your comment!
Please enter your name here