ನೆಲ್ಯಾಡಿ: ಬೆಳ್ತಂಗಡಿ ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಶಾಖೆ ಉದ್ಘಾಟನೆ

0

ನೆಲ್ಯಾಡಿ: ಬೆಳ್ತಂಗಡಿ ಬಸ್‌ ನಿಲ್ದಾಣದ ಎದುರಿನ ಸಾಂತೋಮ್ ಟವರ್ ನ ಮೊದಲ ಮಹಡಿಯಲ್ಲಿ ಕಳೆದ 13 ವರ್ಷದ ಹಿಂದೆ ಪ್ರಾರಂಭಗೊಂಡು ಕಾರ್ಯಾಚರಿಸುತ್ತಿರುವ ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ 2ನೇ ಶಾಖೆ ನೆಲ್ಯಾಡಿಯಲ್ಲಿ ತೋಮ್ಸನ್ ಕಾಂಪ್ಲೆಕ್ಸ್ ನಲ್ಲಿ ಸೆ.30ರಂದು ಉದ್ಘಾಟನೆಗೊಂಡಿತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ ಆಶೀರ್ವಚನ ಮಾಡಿದರು. ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಬಾಣಜಾಲು ಕಛೇರಿ ಉದ್ಘಾಟಿಸಿದರು. ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅನಿಲ್‌ ಎ.ಜೆ.ಅಧ್ಯಕ್ಷತೆ ವಹಿಸಿದರು. ಗಣಕ ಯಂತ್ರದ ಉದ್ಘಾಟನೆಯನ್ನು ನೆಲ್ಯಾಡಿ ಸೈಂಟ್ ಅಲ್ಫೋನ್ಸ ಚರ್ಚ್ ಧರ್ಮಗುರು ರೆ.ಫಾ.ಶಾಜಿ ಮ್ಯಾಥ್ಯು ವೆಟ್ಟಂತಡತ್ತಿಲ್ ನೆರವೇರಿಸಿದರು.

ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಮ್ ಬಿಲಾಲ್ ಭದ್ರತಾ ಕೋಶದ ಉದ್ಘಾಟನೆ, ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘ ಉಪಾಧ್ಯಕ್ಷ ಜಾರ್ಜ್ ಎಮ್.ವಿ. ನಿರಖು ಠೇವಣಿ ಸರ್ಟಿಫಿಕೇಟ್ ವಿತರಣೆ, ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕ ಸೆಬಾಸ್ಟಿನ್ ವಿ.ಟಿ ಷೇರು ಸರ್ಟಿಫಿಕೇಟ್ ವಿತರಣೆ, ಕುಟ್ರಪ್ಪಾಡಿ ಸೈಂಟ್ ಮೇರೀಸ್ ಫೊರೋನಾ ಚರ್ಚ್ ಧರ್ಮಗುರು ರೆ.ಫಾ.ವರ್ಗೀಸ್ ಪುದಿಯಡತ್ ಉಳಿತಾಯ ಖಾತೆ ಪುಸ್ತಕ ವಿತರಣೆ ಮಾಡಿದರು.

ಉದನೆ ಸೈಂಟ್ ತೋಮಸ್‌ ಫರೋನಾ ಚರ್ಚ್ ಧರ್ಮಗುರು ರೆ.ಫಾ.ತೋಮಸ್ ಪನಚಿಕ್ಕಲ್, ಶಿರಾಡಿ ಸೈಂಟ್ ಸೆಬಾಸ್ಟಿನ್ ಚರ್ಚ್ ಧರ್ಮಗುರು ರೆ.ಫಾ.ಜೋಸೆಫ್ ಪೂರಕುಲ್, ಅಡ್ಡಹೊಳೆ ಸೈಂಟ್ ತೋಮಸ್ ಚರ್ಚ್ ಧರ್ಮಗುರು ರೆ.ಫಾ. ಜೋಸೆಫ್ ಪಾಂಬಕ್ಕೆಲ್, ಕಳೆಂಜ ಸೈಂಟ್ ಸೆಬಾಸ್ಟಿನ್ ಚರ್ಚ್ ಧರ್ಮಗುರು ರೆ.ಫಾ.ಜೋಸೆಫ್ ವಾಳುಕಾರನ್ ಗೌರವ ಉಪಸ್ಥಿತರಿದ್ದರು.

ನಿರ್ದೇಶಕರಾದ ಅಂದಾನಿ, ಜೈಸನ್, ಬಾಬು ತೋಮಸ್, ಬಿಜು, ಸೋಫಿ, ಫಿಲೋಮಿನಾ, ನಾಮ ನಿರ್ದೇಶಕರಾದ ಬಿಜು ಎಂ.ಜೆ., ಸೆಬಾಸ್ಟಿಯನ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮನೋಜ್ ಪಿ.ಎ ಸ್ವಾಗತಿಸಿದರು. ನಿರ್ದೇಶಕ ಜೈಸನ್ ವಂದಿಸಿ, ನಿರ್ದೇಶಕ ಸೆಬಾಸ್ಟಿಯನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here