ಬೆಳಂದೂರು ಶಾಲಾ ನಲಿ-ಕಲಿ ತರಗತಿಗೆ ಪೀಠೋಪಕರಣ ಕೊಡುಗೆ

0

ಕಾಣಿಯೂರು: ಕೆಲಂಬೀರಿ ಬ್ರಹ್ಮಬೈದೆರುಗಳ ಗರಡಿಯ ಆಡಳಿತ ಸಮಿತಿ ಮಾಜಿ ಅಧ್ಯಕ್ಷರಾದ ಉಮೆಶ್ ಕೆ.ಎನ್ ಕಾರ್ಲಾಡಿ ಹಾಗೂ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಮೇಶ್ ಕೆ.ಎನ್ ಕಾರ್ಲಾಡಿ ಮತ್ತು ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಪ್ರಾಯೋಜಕತ್ವದಲ್ಲಿ ಬೆಳಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿ-ಕಲಿ ತರಗತಿಗೆ ಪೀಠೋಪಕರಣ ಕೊಡುಗೆಯ ಹಸ್ತಾಂತರ ಕಾರ್ಯಕ್ರಮವು ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಉದ್ಘಾಟಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳಂದೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಭವಾನಿಶಂಕರ್ ಅಗಳಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಮರಕ್ಕಡ, ಶಾಲಾ ಮುಖ್ಯಗುರು ಜಾನಕಿ, ರೋಟರಿ ಕ್ಲಬ್‌ನ ಕಾರ್ಯದರ್ಶಿ ಮೋಹನ್‌ದಾಸ್ ಎಣ್ಣೆಮಜಲು, ಸದಸ್ಯರಾದ ಉಮೇಶ್ ಕೆ.ಎನ್ ಕಾರ್ಲಾಡಿ, ರಮೇಶ್ ಕೆ.ಎನ್ ಕಾರ್ಲಾಡಿ ಉಪಸ್ಥಿತರಿದ್ದರು. ರೋಟರಿ ಕ್ಲಬ್‌ನ ಸದಸ್ಯರಾದ ಗಿರಿಧರ ಸ್ಕಂದ, ಮಾಲಪ್ಪ ಸಂಕೇಶ, ವೆಂಕಟೇಶ್, ಚಂದ್ರಶೇಖರ್ ನಾಯರ್, ಇನ್ನರ್ ವೀಲ್ ಸದಸ್ಯರಾದ ಜಾನಕಿ ವೆಂಕಟೇಶ್, ಪ್ರಾಂಜಲಿ ಗಿರಿಧರ್, ಶ್ರೀಮತಿ ಕಿಶೋರ್ ಕೂಜುಗೋಡು, ಹಾಗೂ ಬೆಳಂದೂರು ಗ್ರಾ.ಪಂ.ಸದಸ್ಯೆ ತೇಜಾಕ್ಷಿ ಕೊಡಂಗೆ, ನಿವೃತ್ತ ಮುಖ್ಯಶಿಕ್ಷಕ ಸೋಮಪ್ಪ ಗೌಡ ಕಮಿಲ, ವೇಣುಗೋಪಾಲ ಕಳುವಾಜೆ. ಸತೀಶ್ ಮಾರ್ಕಜೆ, ಚಂದ್ರಶೇಖರ್ ಮುಂಡಾಲ, ರಜಾಕ್ ಅಂಕಜಾಲು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ರೋಟರಿ ಕ್ಲಬ್‌ನ ಸದಸ್ಯ ಗೋಪಾಲ್ ಎಣ್ಣೆಮಜಲು ಪ್ರಾಸ್ತಾವಿಕ ಮಾತನಾಡಿದರು. ಕ್ಲಬ್‌ನ ಸದಸ್ಯರಾದ ಭರತ್ ನೆಕ್ರಾಜೆ ಸ್ವಾಗತಿಸಿದರು. ಕಡಬ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರು, ಕ್ಲಬ್‌ನ ಸದಸ್ಯರು ರಾಮಕೃಷ್ಣ ಮಲ್ಲಾರ ಕಾರ್ಯಕ್ರಮ ನಿರೂಪಿಸಿದರು. ಬೆಳಂದೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಮರಕ್ಕಡ ವಂದಿಸಿದರು.

LEAVE A REPLY

Please enter your comment!
Please enter your name here