ರಾಮಕುಂಜ: ರಿಕ್ಷಾ ಚಾಲಕ ದಿನೇಶ್ ಮಡಿವಾಳ ನಿಧನ

0

ರಾಮಕುಂಜ: ಇಲ್ಲಿನ ಇರ್ಕಿ ನಿವಾಸಿ ಪದ್ಮಯ ಮಡಿವಾಳರವರ ಪುತ್ರ, ರಿಕ್ಷಾ ಚಾಲಕ ದಿನೇಶ್ ಮಡಿವಾಳ(40ವ.)ರವರು ಅ.1ರಂದು ರಾತ್ರಿ ನಿಧನರಾಗಿದ್ದಾರೆ.


ಗೋಳಿತ್ತಡಿಯಲ್ಲಿ ರಿಕ್ಷಾ ಬಾಡಿಗೆಗೆ ಓಡಾಟ ನಡೆಸುತ್ತಿದ್ದ ದಿನೇಶ್ ಮಡಿವಾಳ ಅವರು ಅ.1ರಂದು ಸಂಜೆ ಕಾಂಚನಕ್ಕೆ ಬಾಡಿಗೆಗೆ ತೆರಳಿದ್ದವರು ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಬಂದಿದ್ದರು. ಮನೆಯಲ್ಲಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ಮನೆಯವರು ತಕ್ಷಣ ಉಪ್ಪಿನಂಗಡಿಗೆ ಬಳಿಕ ಪುತ್ತೂರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ಅವರು ಮೃತಪಟ್ಟರು ಎಂದು ವರದಿಯಾಗಿದೆ.


ದಿನೇಶ್ ಮಡಿವಾಳ ಅವರು ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ವೇಳೆ ದೇವರ ಉತ್ಸವ, ದೈವಗಳ ನೇಮೋತ್ಸವದ ಸಂದರ್ಭದಲ್ಲಿ ಜೀಟಿಗೆ ಹಿಡಿಯುವ ಸೇವೆ ಮಾಡುತ್ತಿದ್ದರು. ಮೃತರು ತಂದೆ ಪದ್ಮಯ ಮಡಿವಾಳ, ತಾಯಿ ಜಯಂತಿ, ಪತ್ನಿ ರಂಜಿತಾ, ಪುತ್ರಿ, ಸಹೋದರ ಸತೀಶ್, ಸಹೋದರಿಯರಾದ ಮಮತಾ, ಗೀತಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here