ಮುಂಡೂರು ಅಬೂಬಕ್ಕರ್ ಸಿದ್ಧಿಕ್ ಮಸೀದಿಯಲ್ಲಿ ಈದ್ ಸ್ನೇಹ ಸಮ್ಮಿಲನ

0

ಪುತ್ತೂರು: ಅಬೂಬಕ್ಕರ್ ಸಿದ್ಧಿಕ್ ಜುಮಾ ಮಸ್ಜಿದ್ ಮುಂಡೂರು ಇದರ ಆಶ್ರಯದಲ್ಲಿ ಈದ್ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಜಮಾಅತ್ ಖತೀಬ್ ಆಸೀಫ್ ಫೈಝಿ ಉದ್ಘಾಟಿಸಿದರು. ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಮಾತನಾಡಿ ನಾವು ಪರಸ್ಪರ ಸಮಾಜದಲ್ಲಿ ಶಾಂತಿ ಸೌಹಾರ್ದದಿಂದ ಕೂಡಿ ಬಾಳಬೇಕು, ಜಾತ್ಯಾತೀರ ತತ್ವ ಸಿದ್ದಾಂತಗಳನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂದು ಹೇಳಿದರು. ಅಬ್ದುಲ್ ರಹಿಮಾನ್ ಹಾಜಿ, ಮಹಮ್ಮದ್ ಮುಂಡೂರು, ಇಬ್ರಾಹಿಂ ಮುಲಾರ್, ಮಹಮ್ಮದ್ ಮುಸ್ಲಿಯಾರ್, ಅಶ್ರಫ್ ಮುಲಾರ್, ಮಯಾಝ್ ಮುಲಾರ್, ಯಾಕೂಬ್ ಅಂಬಾಟ, ಮುಸ್ತಾಪ ಮುಂಡೂರು, ಮಹಮದ್ ಆಲಡ್ಕ, ಗಫೂರ್ ಅಂಬಟ, ವೇದಿಕೆಯಲ್ಲಿ ಮುಂಡೂರು ಕಾಂಗ್ರೆಸ್ ವಲಯ ಅಧ್ಯಕ್ಷರಾದ ಸುಪ್ರೀತ್ ಕಣ್ಣರಾಯ, ಮುಂಡೂರು ಕಾಂಗ್ರೆಸ್ ಬೂತ್ ಅಧ್ಯಕ್ಷರಾದ ಗಣೇಶ್ ಕೊರುಂಗು, ಸದಾಶಿವ ಅಂಬಟ, ಬಾಲಕೃಷ್ಣ ಬನೇರಿ ಉಪಸ್ಥಿತರಿದ್ದರು ಮುಂಡೂರು ಮಸೀದಿ ಅಧ್ಯಕ್ಷ ಯಾಕೂಬ್ ಮುಲಾರ್ ಪ್ರಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ರಿಯಾಜ್ ಅಂಬಟ, ಹನೀಫ್ ಮುಂಡೂರು, ಶಾಫಿ ಅಂಬಟ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here