3 ವರ್ಷದ ಹಿಂದೆ ಬಜತ್ತೂರಿನಲ್ಲಿ ನಡೆದ ಲಾರಿ ಅಪಘಾತ ಪ್ರಕರಣ-ಆರೋಪಿ ಚಾಲಕ ದೋಷಮುಕ್ತ

0

ಪುತ್ತೂರು:ಮೂರು ವರ್ಷದ ಹಿಂದೆ ಬಜತ್ತೂರಿನಲ್ಲಿ ನಡೆದಿದ್ದ ಲಾರಿ ಅಪಘಾತಕ್ಕೆ ಸಂಬಂಧಿಸಿ ಆರೋಪಿ ಲಾರಿ ಚಾಲಕನನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. 2020ರ ಸೆ.16ರಂದು ಆರೋಪಿ ಲಾರಿ ಚಾಲಕ ಮಲ್ಲಿಕಾರ್ಜುನ ಅವರು ಚಲಾಯಿಸುತ್ತಿದ್ದ ಲಾರಿ ಬಜತ್ತೂರು ಗ್ರಾಮದ ವಳಾಲ್ ಎಂಬಲ್ಲಿ ಕಂಟೈನರ್‌ನ ಹಿಂಬದಿಗೆ ಡಿಕ್ಕಿಯಾಗಿತ್ತು.ಅಪಘಾತದ ತೀವ್ರತೆಗೆ ಲಾರಿ ಮತ್ತು ಕಂಟೈನರ್ ಜಖಂಗೊಂಡಿದ್ದು, ಲಾರಿ ಚಾಲಕ ಮಲ್ಲಿಕಾರ್ಜುನ ಅವರು ತೀವ್ರ ಗಾಯಗೊಂಡಿದ್ದರು.ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿ ಆರೋಪಿ ಮಲ್ಲಿಕಾರ್ಜುನ ಅವರ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡ್, ನಿಶಾ ಕುಮಾರಿ ವಾದಿಸಿದ್ದರು.

LEAVE A REPLY

Please enter your comment!
Please enter your name here