![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಗಾಂಧೀ ಜಯಂತಿ ಪ್ರಯುಕ್ತ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಪುತ್ತೂರು ವಲಯ ವತಿಯಿಂದ, ಉಪ್ಪಿನಂಗಡಿಯ ಸ್ವಚ್ಛತೆಯ ಹರಿಕಾರರಾಗಿರುವ “ಪೌರ ಸೈನಿಕರಿಗೆ” ಉಪ್ಪಿನಂಗಡಿಯಲ್ಲಿ ಸನ್ಮಾನಿಸಿದರು. ನಂತರ ಮಾಜಿ ಸೈನಿಕ ಉಪ್ಪಿನಂಗಡಿ ಕೊಯಿಲ ಚೆನ್ನಪ್ಪ ಗೌಡರವರನ್ನು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದರು. ಎಸೋಸಿಯೇಶನ್ನ ಅಧ್ಯಕ್ಷ ರಘ ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ, ನಿಕಟಪೂರ್ವ ಅಧ್ಯಕ್ಷ ನಾಗೇಶ್ ಟಿ.ಎಸ್., ಗೌರವಾಧ್ಯಕ್ಷ ಹರೀಶ್ ಎಲಿಯ, ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ, ಎಸ್ಕೆಪಿಎ ಸಹಕಾರಿ ಸಂಘದ ನಿರ್ದೇಶಕ ಸುದರ್ಶನ ರಾವ್ ಹಾಗೂ ಎಸೋಸಿಯೇಶನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2023/10/0f6e6eed-6099-412f-8668-0eef0a77cd7f.jpg)
![](https://puttur.suddinews.com/wp-content/uploads/2023/10/a6d3324a-0e08-44cb-ad12-cfe83092e761.jpg)