ಕಣಿಯಾರ್‌ ಮಲೆ ರಬ್ಬರ್‌ ತೋಟದಲ್ಲಿ ಕಾಡುಪ್ರಾಣಿಗೆ ಬಲಿಯಾದ ಕರುವಿನ ಮೃತದೇಹ ಪತ್ತೆ

0

ಪುತ್ತೂರು: ಕಣಿಯಾರ್‌ ಮಲೆ ಘಟಕದ ಅರ್ತಿಯಡ್ಕ ರಬ್ಬರ್ ತೋಟದಲ್ಲಿ ಕಾಡುಪ್ರಾಣಿಗೆ ಕರುವೊಂದು ಬಲಿಯಾಗಿದೆ. ಕರುವನ್ನು ಕೊಂದು ರಬ್ಬರ್ ಮರಕ್ಕೆ ಎಳೆದೊಯ್ದ ಕಾಡುಪ್ರಾಣಿ ಮರದಕೊಂಬೆಯೆಡೆಗೆ ಸಿಕ್ಕಿಸಿ ಕರುವಿನ ದೇಹವನ್ನು ತಿಂದು ತೇಗಿ ತೆರಳಿದೆ. ಮರದ ಕೊಂಬೆಯಲ್ಲಿ ಕರುವಿನ ಮೃತದೇಹ ನೇತಾಡುತ್ತಿರುವುದನ್ನು ಕಂಡ ರಬ್ಬರ್‌ ಟ್ಯಾಪಿಂಗ್‌ ಕಾರ್ಮಿಕರು ಸಂಸ್ಥೆಯ ಕಾರ್ಯ ನಿರ್ವಾಹಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ.ಕಾರ್ಮಿಕರಲ್ಲಿ ಜಾಗರೂಕರಾಗಿರುವಂತೆ ತಿಳಿಸಿರುವ ಕಾರ್ಯನಿರ್ವಾಹಣಾಧಿಕಾರಿ ಒಂದು ವಾರದೊಳಗಾಗಿ ಕಾಡು ಕಡಿಯುವ ಕೆಲಸ ಆರಂಭಿಸುವುದಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here