ನಾಳೆ(ಅ.8) ಚಂದನ ವಾಹಿನಿಯಲ್ಲಿ ಸುಂದರ ರೈ ಮಂದಾರ ನಿರ್ದೇಶನದ ಅಂಬರ ಮರ‍್ಲೆರ್

0

ಪುತ್ತೂರು: ಅರ್ನ ಕ್ರೀಯೇಷನ್ಸ್ ಅರ್ಪಿಸುವ ರಂಗದ ರಾಜೆ ಸುಂದರ ರೈ ಮಂದಾರ ನಿರ್ಮಾಣ, ಕಥೆ ಮತ್ತು ಪ್ರಧಾನ ನಿರ್ದೇಶನದಲ್ಲಿ ಮೂಡಿಬಂದಿರುವ ತುಳು ಹಾಸ್ಯ ಧಾರಾವಾಹಿ ‘ಅಂಬರ ಮರ‍್ಲೆರ್’ ಇದರ 3 ನೇ ಸಂಚಿಕೆಯು ಅ.8 ರಂದು ಮಧ್ಯಾಹ್ನ 1.30 ಕ್ಕೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಪ್ರಜ್ವಲ್ ಅತ್ತಾವರ ಸಂಚಿಕೆ ನಿರ್ದೇಶನದಲ್ಲಿ ಮೂಡಿಬಂದಿರುವ ಧಾರಾವಾಹಿಯ 3 ನೇ ಸಂಚಿಕೆಯು ಪುತ್ತೂರು ಹಾಗೂ ಕುಂಬ್ರ ಪರಿಸರಲ್ಲಿ ಚಿತ್ರೀಕರಣಗೊಂಡಿದ್ದು ಕುಸಲ್ದರಸೆ ನವೀನ್ ಡಿ’ಪಡೀಲ್, ಸುಂದರ ರೈ ಮಂದಾರ, ರಾಜೇಶ್ ಮೀಯಪದವು, ನಿತಿನ್ ಹೊಸಂಗಡಿ, ಡಾ.ಪ್ರದೀಪ್,ಚಂದ್ರಹಾಸ ಕದ್ರಿ, ಮಾ.ತುಷಾರ್ ಸಹಿತ ಹಲವು ಕಲಾವಿದರು ನಟಿಸಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಪ್ರಾಯೋಜಕತ್ವದಲ್ಲಿ ಈ ಸಂಚಿಕೆಯು ಮೂಡಿಬಂದಿದೆ. ಹಲವು ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ಚಂದನ ವಾಹಿನಿಯು ಇದೀಗ ತುಳು ಭಾಷೆಯ ಧಾರಾವಾಹಿಯ ಪ್ರಸಾರ ಮಾಡುವ ಮೂಲಕ ಮತ್ತಷ್ಟು ವೀಕ್ಷಕ ಬಳಗದೊಂದಿಗೆ ತನ್ನ ಟಿಆರ್‌ಪಿಯನ್ನು ಹೆಚ್ಚಿಸಿಕೊಂಡಿದೆ.


ಪ್ರತಿ ವಾರ ಹಾಸ್ಯ ರಸದೌತಣ
ಅಂಬರ ಮರ‍್ಲೆರ್ ಈಗಾಗಲೇ ಹಲವು ಎಪಿಸೋಡ್‌ಗಳ ಚಿತ್ರೀಕರಣ ಮುಗಿಸಿಕೊಂಡಿದ್ದು ಪ್ರತಿ ವಾರ ಹೊಸ ಕಥೆಯೊಂದಿಗೆ ವೀಕ್ಷಕರನ್ನು ನಗೆ ಕಡಲಲ್ಲಿ ತೇಲಾಡಿಸಲಿದೆ. ವಾರದ ಪ್ರತಿ ಆದಿತ್ಯವಾರ ಮಧ್ಯಾಹ್ನ 1.30 ರಿಂದ 2 ಗಂಟೆಯವರೇಗೆ ಪ್ರಸಾರವಾಗುವ ಈ ಧಾರಾವಾಹಿಯು ಸದಭಿರುಚಿಯ ಕಥಾವಸ್ತುವಿನಿಂದ ತನ್ನದೇ ವೀಕ್ಷಕ ಬಳಗವನ್ನು ಹೊಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here