ಅ.8: ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಪದಾಧಿಕಾರಿಗಳ ಪದಗ್ರಹಣ

0

ಪುತ್ತೂರು: ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್( ಪೇಸ್) ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅ.೮ರಂದು ಪುತ್ತೂರಿನ ಮನಿಷಾ ಕಟ್ಟಡದ ನೆಲಮಹಡಿ ಸಭಾಂಗಣದಲ್ಲಿ ಸಾಯಂಕಾಲ ಏಳು ಗಂಟೆಗೆ ನಡೆಯಲಿದೆ.


ಪೇಸ್ ನ ಅಧ್ಯಕ್ಷರಾದ ಅಕ್ಷಯ್ ಎಸ್.ಕೆ. ಕಾರ್ತಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ವವಾಣಿ ಪತ್ರಿಕೆಯ ಅಂಕಣಕಾರರಾದ ಗಣೇಶ್ ಭಟ್ ವಾರಣಾಸಿ, ಪೇಸ್ ನ ಗೌರವಾಧ್ಯಕ್ಷರಾದ ಎಸ್.ಕೆ.ಆನಂದ ಕುಮಾರ್ ಆಗಮಿಸಲಿದ್ದಾರೆ.


ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರ ವೃತ್ತಿಗುರು ಡಿಸೈನ್ ಬಿಲ್ಡರ್ಸ್ ನ ಕೆ.ಕೇಶವ ಭಟ್ ರವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here