ಕಳುವಾಜೆ ವೆಂಕಟರಮಣ ಗೌಡರ ಮನೆಯಲ್ಲಿ ಯಕ್ಷಗಾನ ತಾಳಮದ್ದಲೆ

0

ಪುತ್ತೂರು: ಕಳುವಾಜೆ ಶ್ರೀ ವೆಂಕಟರಮಣ ಗೌಡರ ಮನೆಯಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆಯ ಪ್ರಯುಕ್ತ ಶ್ರೀ ಸತ್ಯನಾರಾಯಣ ವ್ರತಾಚರಣೆ ಎಂಬ ಯಕ್ಷಗಾನ ತಾಳಮದ್ದಲೆ ನಡೆಯಿತು .ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ, ಚೆಂಡೆ ವಾದಕರಾಗಿ ಮುರುಳಿಧರ ಕಲ್ಲೂರಾಯ ಕುಂಜೂರುಪಂಜ, ಮದ್ದಳೆಯಲ್ಲಿ ಮುರಳಿ ಹಳೆನೇರೆಂಕಿ ಸಹಕರಿಸಿದರು.
ಮುಮ್ಮೇಳದಲ್ಲಿ ವಿಷ್ಣು ಮತ್ತು ತುಂಗಧ್ವಜನಾಗಿ ರಾಧಾಕೃಷ್ಣ ಕಲ್ಚಾರ್ , ಸಾಧುವೈಶ್ಯ ಮತ್ತು ಗೋವಳನಾಗಿ ಗುಡ್ಡಪ್ಪ ಬಲ್ಯ, ನಾರದ ಮತ್ತು ಚಂದ್ರಕೇತುವಾಗಿ ತಾರಾನಾಥ ಸವಣೂರು, ಜ್ವಾಲಮುಖ ಮತ್ತು ಲೀಲಾವತಿಯಾಗಿ ಪ್ರಸಾದ್ ಸವಣೂರು, ರಾಜಭಟ ಮತ್ತು ಕಲಾವತಿಯಾಗಿ ಶ್ರುತಿ ಬಲ್ನಾಡು ಸಹಕರಿಸಿದರು.

LEAVE A REPLY

Please enter your comment!
Please enter your name here