ಅಂತರ್ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಬಂಟ್ರದ ಚರಿಷ್ಮಾ ರಾಷ್ಟ್ರಮಟ್ಟಕ್ಕೆ ಆಯ್ಕೆ- ಶಾಸಕಿ ಭಾಗೀರಥಿ ಮುರುಳ್ಯರಿಂದ ಸನ್ಮಾನ

0

ಕಡಬ: ಬಂಟ್ರ ಗ್ರಾಮದ ಬಸವಪಾಲು ನಿವಾಸಿ ಕಡಬ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕು.ಚರಿಷ್ಮಾಅ.15ರಂದು ತೆಲಂಗಾಣ ರಾಜ್ಯದ ವಾರಂಗಾಲ್ ನ ಜವಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ 34ನೇ ದಕ್ಷಿಣ ವಲಯ ಅಂತರಾಜ್ಯ ಮಟ್ಟದ ಜೂನಿಯರ್ ಅಥ್ಲೆಟಿಕ್ಸ್ 16 ವರ್ಷ ವಯೋಮಿತಿಯ 2000 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿ ಸಾಧನೆಗೈದ ಬಾಲಕಿಗೆ ಶುಭ ಹಾರೈಸಿ ಅಭಿನಂದಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಾಕೇಶ್ ರೈ ಕೆಡೆಂಜಿ, ರಮೇಶ್ ಕಲ್ಪುರೆ, ಪ್ರಕಾಶ್ ಕಡಬ, ಮನೋಹರ್ ರೈ, ಸೀತಾರಾಮ ಗೌಡ ಪೊಸವಳಿಕೆ, ಹರೀಶ್ ಕೊಡಂದೂರು, ಗಣೇಶ್ ಬಸವಪಾಲು, ಶ್ರೀನಿವಾಸ್ ರೈ ಮುಂಡ್ರಾಡಿ, ಕೃಷ್ಣ ಎಂ ಆರ್, ಪ್ರೇಮ ಪಿಲಿಮಜಲು, ವಾಸುದೇವ ಕೊಲ್ಲೆಸಾಗು, ರಮೇಶ್ ಕೊಲ್ಲೆಸಾಗು ಪ್ರಮುಖರು ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here