ಬಾಲ್ಯೊಟ್ಟುಮಾರ್ ಶೀರೋಡಿಯನ್  ತರವಾಡು ನೇಮೋತ್ಸವ ಆಮಂತ್ರಣ ಪತ್ರ ಬಿಡುಗಡೆ

0

ಬೆಟ್ಟಂಪಾಡಿ: ಇರ್ದೆ ಬಾಲ್ಯೊಟ್ಟುಮಾರ್ ಶೀರೋಡಿಯನ್ ತರವಾಡು ಮನೆಯಲ್ಲಿ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಡಿ.2 ಮತ್ತು 3ರಂದು ನಡೆಯಲಿದ್ದು, ಆ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಅ.17ರಂದು ತರವಾಡು ಮನೆಯಲ್ಲಿ ನಡೆಯಿತು. ಕುಟುಂಬದ ಹಿರಿಯರಾದ ನರಸಿಂಹ ಪೂಜಾರಿ ಬೊಳ್ಳಿಂಬಲ, ಬಾಳಪ್ಪ ಪೂಜಾರಿ ವಾಣಿನಗರ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶೇಷಪ್ಪ ಪೂಜಾರಿ ಪಳಂಬೆ, ಕಾರ್ಯದರ್ಶಿ ಅವಿನಾಶ್ ಹಾರಾಡಿ, ಹರೀಶ್ ಮಲಾರ್, ಸುಧಾಕರ್ ಕೋಟ್ಯಾನ್, ದಾಮೋದರ್ ಕಡಮಗದ್ದೆ, ಭರತ್ ಬೆಳ್ಳಾರೆ, ಕಿಶೋರ್ ಕೂಟೇಲ್, ಶ್ರೀಧರ ಪೂಜಾರಿ ಹಾರಾಡಿ, ರಾಘವ ಪೂಜಾರಿ ಹಾರಾಡಿ ಜಗದೀಶ್ ಕೊಂಬಾರಡ್ಕ ಹಾಗೂ ಕುಟುಂಬದ ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here