![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ನವರಾತ್ರಿ ಪ್ರಯುಕ್ತ ಕೋಡಿಂಬಾಡಿ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ಮತ್ತು ತುಲಾಭಾರ ಸೇವೆ ಸಲ್ಲಿಸಿ ದೇವರಿಗೆ ವಜ್ರದ ಸಮರ್ಪಣೆ ಮಾಡಿದರು.
ಬೆಳಿಗ್ಗೆ ದೇವಳದಲ್ಲಿ ಚಂಡಿಕಾಹೋಮ ,ವಿಶೇಷ ಪೂಜೆ ಮತ್ತು ತುಲಾಭಾರ ಸೇವೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಭಕ್ತಾದಿಗಳು ಶಾಸಕರ ಕುಟುಂಬಸ್ಥರು ಭಾಗವಹಿಸಿದ್ದರು. ಸೇವಾ ರೂಪದಲ್ಲಿ ತನ್ನ ಹುಟ್ಟೂರ ಆರಾಧ್ಯ ದೇವರಾದ ಮಹಿಷಮರ್ಧಿನಿಗೆ ವಜ್ರದ ಸರವನ್ನು ಸೇವಾರೂಪದಲ್ಲಿ ಸಮರ್ಪಿಸಿದರು. ಪೂಜೆಯ ಬಳಿಕ ಅನ್ನದಾನ ನಡೆಯಿತು.
![](https://puttur.suddinews.com/wp-content/uploads/2023/10/06343f48-852a-4e85-b578-4908a6354f1a.jpg)
![](https://puttur.suddinews.com/wp-content/uploads/2023/10/10c14a5d-7206-4450-8e21-f3a6d0de6cb8.jpg)
![](https://puttur.suddinews.com/wp-content/uploads/2023/10/1100bf4f-bd5c-4890-86ef-934c03b13b08.jpg)