ಅ.24: ಇರ್ದೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ 31ನೇ ವರ್ಷದ ಶಾರದೋತ್ಸವದ ಸಂಭ್ರಮ

0

ಪುತ್ತೂರು: ಶ್ರೀವಿಷ್ಣುಮೂರ್ತಿ ದೇವಾಲಯ ಇರ್ದೆ, ಶ್ರೀ ಶಾರದೋತ್ಸವ ಸಮಿತಿ ಇದರ ವತಿಯಿಂದ ನಡೆಯುವ 31ನೇ ವರ್ಷದ ಶ್ರೀಶಾರದೋತ್ಸವ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.24ರಂದು ನಡೆಯಲಿದೆ.
ನವರಾತ್ರಿ ಉತ್ಸವವು ಅ.15ರಿಂದ ಪ್ರಾರಂಭಗೊಂಡಿದ್ದು ಪ್ರತಿದಿನ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಝನೆ, ವಿಶೇಷ ಕಾರ್ತಿಕ ಪೂಜೆ ಹಾಗೂ ದುರ್ಗಾಪೂಜೆಗಳು ನೆರವೇರುತ್ತಿದೆ.
ಅ.೨೩ರಂದು ಬೆಳಿಗ್ಗೆ ಆಯುಧ ಪೂಜೆ, ಅ.24ರಂದು ಅನಂತರಾಮ ಮಡಕುಳ್ಳಾಯ ಮತ್ತು ರಾಧಾಕೃಷ್ಣ ಭಟ್ ಕಕ್ಕೂರು ಇವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಸಂಘ, ಸುಳ್ಯಪದವು ಕೊರಗಜ್ಜ ಬಾಲ ಭಜನಾ ಸಂಘದವರಿಂದ ಭಜನೆ, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶಾರದಾ ಮಾತೆಗೆ ಮಹಾಪೂಜೆಯ ಬಳಿಕ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ದೇವಾಲಯದಿಂದ ಹೊರಟು ಇರ್ದೆ-ಜೋಡುಮಾರ್ಗ, ಪೇರಲ್ತಡ್ಕ, ಕದಿಕೆ ಚಾವಡಿಯಾಗಿ ಬೆಂದ್ರ್‌ತೀರ್ಥದಲ್ಲಿ ಜಲಜಸ್ಥಂಭನಗೊಳ್ಳಲಿದೆ. ಶೋಭಾಯಾತ್ರೆಯಲ್ಲಿ ಬೈಲಾಡಿ ಶ್ರೀವಿಷ್ಣು ಚಿಣ್ಣರ ಭಜನಾ ತಂಡ, ದೂಮಡ್ಕ ಶ್ರೀ ವಿಷ್ಣು ಮಕ್ಕಳ ಕುಣಿತ ಭಜನಾ ಮಂಡಳಿ, ನಿಡ್ಪಳ್ಳಿ ಶ್ರೀಶಾಂತದುರ್ಗಾ ಭಜನಾ ಮಂಡಳಿ, ಕೋನಡ್ಕ-ಚೂರಿಪದವು ಶೈಲಪುತ್ರಿ ಕುಣಿತ ಭಜನಾ ತಂಡ, ಇರ್ದೆ ಉಪ್ಪಳಿಗೆ ಸಿದ್ಧಿಧಾತ್ರಿ ಮಹಿಳಾ ಕುಣಿತಾ ಭಜನಾ ತಂಡ ಇವರಿಂದ ಕೋಲಾಟ, ಜಾನಪದ ನೃತ್ಯಗಳು, ಇರ್ದೆ ಶ್ರೀ ವಿಷ್ಣು ಸಿಂಗಾರಿ ಮೇದವರಿಂದ ಚೆಂಡೆ ವಾದನ, ಇರ್ದೆ ಶಿವಾಜಿ ಫ್ರೆಂಡ್ಸ್ ಮತ್ತು ರೆಂಜ ಟೈಗರ‍್ಸ್ ಇವರಿಂದ ಆಕರ್ಷಕ ಟ್ಯಾಬ್ಲೋಗಳು ಶೋಭಾಯಾತ್ರೆಯಲ್ಲಿ ಮೇಲೈಸಲಿದೆ ಎಂದು ದೇವಸ್ಥಾನ ಹಾಗೂ ಶಾರದೋತ್ಸವ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here