ಅರಿಯಡ್ಕ: ಕಾಲು ಜಾರಿ ಕೆರೆಗೆ ಬಿದ್ದು ಮೃತ್ಯು

0

ಪುತ್ತೂರು: ವ್ಯಕ್ತಿಯೋರ್ವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಅ.21 ರಂದು ಅರಿಯಡ್ಕ ಗ್ರಾಮದ ಬೈರಮೂಲೆ ಎಂಬಲ್ಲಿಂದ ವರದಿಯಾಗಿದೆ. ಬೈರಮೂಲೆ ಕನ್ನ ಪಾಟಾಳಿಯವರ ಪುತ್ರ ಶಿವಪ್ರಸಾದ್ (40ವ)ರವರು ಮೃತಪಟ್ಟವರಾಗಿದ್ದಾರೆ. ಶಿವಪ್ರಸಾದ್‌ರವರು ಮಿಷನ್ ಮೂಲಕ ಹುಲ್ಲು ತೆಗೆಯುವ ಕೆಲಸ ಮಾಡಿಕೊಂಡಿದ್ದು ಅದರಂತೆ ಅ.21 ರಂದು ಸ್ಥಳೀಯ ಕುರಿಂಜ ಹೊಸಮನೆ ಚಂದ್ರಶೇಖರ ಮಣಿಯಾಣಿ ಎಂಬವರ ತೋಟಕ್ಕೆ ಹುಲ್ಲು ತೆಗೆಯಲು ಹೋಗಿದ್ದು ಅದೇ ತೋಟದಲ್ಲಿದ್ದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಶಿವಪ್ರಸಾದ್‌ರವರು ಕೈ ಕಾಲು ತೊಳೆಯಲು ಕೆರೆಗೆ ಇಳಿದಿದ್ದರು ಎನ್ನಲಾಗಿದ್ದು ಈ ವೇಳೆ ಆಯ ತಪ್ಪಿ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಮೃತರು ತಂದೆ ಕಣ್ಣ ಪಾಟಾಳಿ,
ತಾಯಿ ಸಿದ್ದಮ್ಮ, ಪತ್ನಿ ರಾಧಿಕಾ, ಪುತ್ರಿ ಆರಾಧ್ಯ, ಸಹೋದರ ಸುಬ್ಬಪ್ಪ ಪಾಟಾಳಿ, ಸಹೋದರಿಯರಾದ ವೇದಾವತಿ, ಪುಷ್ಪಾವತಿ ಮತ್ತು ರಾಜೀವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ ಧನಂಜಯ್ ಹಾಗೂ ಸಿಬ್ಬಂದಿಗಳು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುತ್ತೂರು ಅಗ್ನಿ ಶಾಮಕ ದಳದವರು ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ.ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಂಚಾಯತ್ ಸದಸ್ಯರು, ಊರಿನ ನಾಗರೀಕರು ನೆರೆದಿದ್ದರು.

LEAVE A REPLY

Please enter your comment!
Please enter your name here