ಬೊಳುವಾರು ಕ್ಷೇತ್ರದಲ್ಲಿ ಕ್ಷೇತ್ರದ ನಾಮಫಲಕ ಅನಾವರಣ

0

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದ ನಾಮಫಲಕ ಅನಾವರಣ ಕಾರ್ಯಕ್ರಮ ಅ.೨೧ರಂದು ನಡೆಯಿತು.
ನಾಮಫಲಕದ ದಾನಿ ಪದ್ಮ ಸೋಲಾರ್‌ನ ಮಾಲಕ ಪದ್ಮನಾಭ ಶೆಟ್ಟಿ ನಾಮಫಲಕವನ್ನು ಅನಾವರಣ ಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕ ಶಂಕರನಾರಾಯಣ ಭಟ್, ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್, ಹರಿಪ್ರಸಾದ್‌ನ ಹೊಟೇಲ್‌ನ ಮಾಲಕ ಹರಿನಾರಾಯಣ ಹೊಳ್ಳ, ಮಾಜಿ ನಗರಸಭಾ ಸದಸ್ಯ ಸುಜೀಂದ್ರ ಪ್ರಭು, ವಿಶ್ವಸ್ಥ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್, ಟ್ರಸ್ಟಿಗಳಾದ ಮನೋಹರ್ ರೈ, ಬೇಬಿ ಪೂಜಾರಿ, ಸುಂದರ ನಾಕ್, ಜಲಜಾಕ್ಷಿ ಹೆಗ್ಡೆ, ಹಿರಿಯರಾದ ರಂಗನಾಥ್ ರಾವ್, ಉದ್ಯಮಿ ನಿತಿನ್ ಪಕ್ಕಳ, ರಾಜೇಶ್, ಶಕುಂತಳಾ ವಿ.ಕೆ. ಶೆಟ್ಟಿ, ನಂದನಾ ರೈ, ಉಷಾ ಭಂಡಾರಿ, ಕವಿತಾ, ಪದ್ಮಜಾ, ಗೀತಾ ಉಪಸ್ಥಿತರಿದ್ದರು. ವಿಶ್ವಸ್ಥ ಮಂಡಳಿ ಖಜಾಂಜಿ ಪ್ರಸನ್ನ ಬಳ್ಳಾಲ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿ.ಕೆ. ಶೆಟ್ಟಿ ಧನ್ಯವಾದಗೈದರು. ನಗರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here