ಪಾಲ್ತಾಡಿನಲ್ಲಿ ವ್ಯಾನ್ ಪಲ್ಟಿ – ಈಶ್ವರಮಂಗಲ ಕುಕ್ಕಾಜೆಯ ಪ್ರಯಾಣಿಕರಿಗೆ ಗಾಯ- ಪುತ್ತೂರು ಆಸ್ಪತ್ರೆಗೆ ದಾಖಲು

0

ಪುತ್ತೂರು: ನಿಖಾ ಕಾರ್ಯಕ್ರಮಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ವ್ಯಾನ್ ಪಲ್ಟಿಯಾಗಿ ಅದರಲ್ಲಿದ್ದ ಈಶ್ವರಮಂಲ ಕುಕ್ಕಾಜೆಯ ಪ್ರಯಾಣಿಕರು ಗಾಯಗೊಂಡ ಘಟನೆ ಅ.22ರಂದು ರಾತ್ರಿ ಬೆಳ್ಳಾರೆ ಸಮೀಪದ ಪಾಲ್ತಾಡು ಎಂಬಲ್ಲಿ ನಡೆದಿದೆ.

ವ್ಯಾನಿನಲ್ಲಿ ಸುಮಾರು 19ಕ್ಕೂ ಮಂದಿ ಪ್ರಯಾಣಿಸುತ್ತಿದ್ದು, ಅವರೆಲ್ಲರ ಪೈಕಿ ಇಬ್ಬರಿಗೆ ತೀವ್ರಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈಶ್ವರಮಂಗಲದ ಕುಕ್ಕಾಜೆಯ ಮಂದಿ ಪಾಲ್ತಾಡಿಯ ಆಲಂತ್ತಡ್ಕ ಎಂಬಲ್ಲಿ ನಿಖಾ ಕಾರ್ಯಕ್ರಮಕ್ಕೆ ಹೋಗಿ ಹಿಂದಿರುಗುವ ವೇಳೆ ಪಾಲ್ತಾಡು ಸಮೀಪದ ಮಣಿಕ್ಕಾರ ಬಳಿಕ ವ್ಯಾನ್ ಪಲ್ಟಿಯಾಗಿದೆ. ವ್ಯಾನ್ ರಸ್ತೆಗೆ ಅಡ್ಡಲಾಗಿ ಪಲ್ಟಿಯಾದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಕ್ರೇನ್ ಮುಖಾಂತರ ವ್ಯಾನನ್ನು ತೆಗೆಯಲಾಯಿತು.

LEAVE A REPLY

Please enter your comment!
Please enter your name here