ಪುತ್ತೂರು ಶಾರದೋತ್ಸವ: 9ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ 9ನೇ ದಿನದ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬ್ರಹ್ಮಶ್ರೀ ಹರಿಪ್ರಸಾದ್ ವೈಲಾಯ, ನಿಕಟಪೂರ್ವ ನಗರಸಭಾ ಉಪಾಧ್ಯಕ್ಷೆ ವಿದ್ಯಾ. ಆರ್ ಗೌರಿ ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ಶುಭ‌ ಹಾರೈಸಿದರು. ಈ ಸಂದರ್ಭದಲ್ಲಿ ಶಾರದಾ ಭಜನಾ‌ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್, ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಮಂದಿರದ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಯಶವಂತ ಆಚಾರ್ಯ, ಕರಸೇವಕರಾದ ಜಯ ಕಿರಣ್, ವಸಂತ್, ಪವನ್ ಮೊದಲಾದವರು ಉಪಸ್ಥಿತರಿದ್ದರು. ಉತ್ಸವ ಸಮಿತಿ ಸಂಚಾಲಕ ಪಿ.ಜಿ.ಜಗನ್ನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿಟ್ಲದ ದಕ್ಷಾ ವಿ.ಜೋಗಿಯವರಿಂದ ಸಾಕ್ಸೋಪೋನ್ ವಾದನ ಹಾಗೂ ಗಾನಸಿರಿ ಕಲಾಕೇಂದ್ರ (ರಿ) ದ ಡಾ. ಕಿರಣ್ ಕುಮಾರ್ ಬಳಗದವರಿಂದ ಸುಮಧುರ ಸಂಗೀತ ಲಹರಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here