![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2023/10/b8821576-92f7-474f-9926-fc7676444a1a.jpg)
ಕಾಣಿಯೂರು: ಕಾಣಿಯೂರಿನಲ್ಲಿ ಅಶ್ವತ್ಥ ಮರದ ಕಟ್ಟೆಗೆ ಕಾರು ಡಿಕ್ಕಿಯಾದ ಘಟನೆ ಅ.25ರಂದು ಮುಂಜಾನೆ ವೇಳೆ ನಡೆದಿದೆ.
![](https://puttur.suddinews.com/wp-content/uploads/2023/10/a20bd309-9619-457e-9329-90f53c37aa30.jpg)
ನಿಂತಿಕಲ್ಲು ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾಣಿಯೂರು ಅಮ್ಮನವರ ದೇವಸ್ಥಾನದ ಸಮೀಪ ಇರುವ ಅಶ್ವತ್ಥ ಮರದ ಕಟ್ಟೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಗಾಯಗೊಂಡು ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.