ಮಾಡಾವು ಪರವನ್ ಕುಟುಂಬಸ್ಥರ ಆದೂರು ಮನೆತನದ ಶ್ರೀ ಅಣ್ಣಪ್ಪ ಸ್ವಾಮಿ ಮತ್ತು ಪರಿವಾರ ದೈವಗಳ ಬಾಲಾಲಯ ಪ್ರತಿಷ್ಠೆ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಮಾಡಾವು ,ಸಂತೋಷ್ ನಗರದ ಆದೂರು ಮನೆತನದ ತರುವಾಡು ಮನೆಯಲ್ಲಿ ಶ್ರೀ ಅಣ್ಣಪ್ಪ ಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಮೂಲ ಬಿಂಬಗಳಿಗೆ ಬಾಲಾಲಯ ಪ್ರತಿಷ್ಠೆಯು ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಅ26ರಂದು ನಡೆಯಿತು. ಕಾರ್ಯಕ್ರಮದ  ಮಾರ್ಗದರ್ಶನವನ್ನು ಎ.ಕೆ.ಮಣಿಯಾಣಿ ಬೆಳ್ಳಾರೆ ನಡೆಸಿಕೊಟ್ಟರು.  ಈ ಸಂದರ್ಭದಲ್ಲಿ ಕುಟುಂಬದ ಯಜಮಾನ ಕೋಟಿ ಪರವ ಮಾಡಾವು, ಶ್ರೀ ಅಣ್ಣಪ್ಪ ಸ್ವಾಮಿ ಪರಿವಾರ ದೈವಗಳ ಆರಾಧನಾ ಸಮಿತಿ ಸದಸ್ಯರು ಹಾಗೂ ಪರವನ್ ಕುಟುಂಬಸ್ಥರು ಉಪಸ್ಥಿತರಿದ್ದರು. ಮದ್ಯಾಹ್ನ ಮಹಾಪೂಜೆ, ಶ್ರೀ ಮುಡಿ ಗಂಧ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here