ನಾಳೆ(ಅ.29) ಚಂದನ ವಾಹಿನಿಯಲ್ಲಿ ಅಂಬರ ಮರ‍್ಲೆರ್

0

ಪುತ್ತೂರು: ಅರ್ನ ಕ್ರಿಯೇಷನ್ಸ್ ಅರ್ಪಿಸುವ, ರಂಗಭೂಮಿ ಕಲಾವಿದ ರಂಗದ ರಾಜೆ ಸುಂದರ ರೈ ಮಂದಾರ ಕಥೆ, ನಿರ್ಮಾಣ ಮತ್ತು ಪ್ರಧಾನ ನಿರ್ದೇಶನದಲ್ಲಿ ಮೂಡಿಬಂದಿರುವ ತುಳು ಸೂಪರ್ ಹಿಟ್ ಕಾಮಿಡಿ ಧಾರಾವಾಹಿ ‘ಅಂಬರ ಮರ‍್ಲೆರ್’ ಅ.29 ರಂದು ಮಧ್ಯಾಹ್ನ 1.30 ಕ್ಕೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಈಗಾಗಲೇ ಕೋಟ್ಯಾಂತರ ವೀಕ್ಷಕರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿರುವ ಪ್ರಜ್ವಲ್ ಕುಮಾರ್ ಅತ್ತಾವರ ಸಂಚಿಕೆ ನಿರ್ದೇಶನ, ಧನು ರೈ ಪುತ್ತೂರು ಛಾಯಾಗ್ರಹಣದ ಅಂಬರ ಮರ್ಲೆರ್ ತುಳು ಧಾರಾವಾಹಿಯ ಈ ಸಂಚಿಕೆಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಪ್ರಾಯೋಜಿಸಿದ್ದಾರೆ. ಧಾರಾವಾಹಿಯಲ್ಲಿ ಸುಂದರ ರೈ ಮಂದಾರ, ಚಂದ್ರಹಾಸ ಶೆಟ್ಟಿ ಮಾಣಿ, ಅರುಣ್‌ಚಂದ್ರ ಬಿಸಿರೋಡ್, ರಾಜೇಶ್ ಮಿಯಪದವು, ಸೋಮನಾಥ ಶೆಟ್ಟಿ ಮಂಗಲ್ಪಾಡಿ, ಚೇತಕ್ ಪೂಜಾರಿ, ಶ್ರೀಧರ್ ಫರಂಗಿಪೇಟೆ, ವಿಜಯ್ ಮಯ್ಯ, ಕವಿತಾ ದಿನಕರ್, ಪ್ರಜ್ವಲ್ ಆಚಾರ್ಯ, ಪ್ರಸಾದ್ ಕೊಲ, ಮೋನಿ ಮಾಣಿಯಾಣಿ ಮತ್ತು ಅಭಿಶ್ ಎಸ್.ರೈ ಅಭಿನಯಿಸಿದ್ದಾರೆ.


ಕೋಟಿ ಗಡಿ ದಾಟಿದ ವೀಕ್ಷಕರ ಸಂಖ್ಯೆ
ಸದಭಿರುಚಿಯ ಕಾರ್ಯಕ್ರಮಗಳ ಪ್ರಸಾರದ ಮೂಲಕ ತನ್ನದೇ ವೀಕ್ಷಕ ಬಳಗವನ್ನು ಹೊಂದಿರುವ ದೂರದರ್ಶನ ಚಂದನ ವಾಹಿನಿಯು ತುಳು ಭಾಷೆಗೆ ಪ್ರಾಧಾನ್ಯತೆ ನೀಡುವ ಮೂಲಕ ಅಂಬರ ಮರ‍್ಲೆರ್ ಧಾರಾವಾಹಿಯನ್ನು ಪ್ರತಿ ಆದಿತ್ಯವಾರ ಮಧ್ಯಾಹ್ನ 1.30 ಕ್ಕೆ ಪ್ರಸಾರ ಮಾಡುತ್ತಿದ್ದು ಈಗಾಗಲೇ 1 ಕೋಟಿ 30 ಲಕ್ಷಕ್ಕೂ ಅಧಿಕ ವೀಕ್ಷಕರು ಈ ಧಾರಾವಾಹಿಯನ್ನು ವೀಕ್ಷಣೆ ಮಾಡಿದ್ದು ಆ ಮೂಲಕ ಚಂದನ ವಾಹಿನಿಯು ತನ್ನ ಟಿಆರ್‌ಪಿಯನ್ನು ಹೆಚ್ಚಿಸಿಕೊಂಡಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here