ವಿಟ್ಲ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಶಾಸಕ ಅಶೋಕ್‌ ಕುಮಾರ್‌ ರೈ

0

ಹೆರಿಗೆ ತಜ್ಞರ ನೇಮಕಕ್ಕೆ ಶಾಸಕರಿಗೆ ಮನವಿ


ಪುತ್ತೂರು:ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಅಶೋಕ್ ರೈ ಯವರು ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರ ಕೊರತೆ ಇರುವ ಕಾರಣ‌ ವಿಟ್ಲ ಭಾಗದ ಜನತೆಗೆ ಸಮಸ್ಯೆಯಾಗಿದೆ.‌ಹಲವು ವರ್ಷಗಳಿಂದ ಇಲ್ಲಿ ಹೆರಿಗೆ ತಜ್ಞರನ್ನು ನೇಮಕ ಮಾಡಿಲ್ಲ. ಗ್ರಾಮೀಣ ಭಾಗದ ಜನತೆಗೆ ಇದರಿಂದ ತುಂಬಾ ಸಮಸ್ಯೆಯಾಗುತ್ತಿರುವ ಬಗ್ಗೆ ಶಾಸಕರಲ್ಲಿ ಮಾಹಿತಿ ನೀಡಿದರು.‌

ಡಯಾಲಿಸಿಸ್ ಕೇಂದ್ರ ಪ್ರಾರಭಮಾಡುವಂತೆ ಮನವಿ ಸಲ್ಲಿಸಲಾಯಿತು.ಸಮುದಾಯ ಕೇಂದ್ರದ ವೈದ್ಯೆ ಡಾ.ವೇದಾವತಿ, ಆರೋಗ್ಯ ರಕ್ಷಾ ಸಮಿತಿ‌ ಸದಸ್ಯರಾದ ಅಬ್ದುಲ್ ರಹಿಮಾನ್, ಅಸ್ಮಾ, ಹಸೈನಾರ್,ಕರುಣಾಕರ್ , ಲತಾವೇಣಿ, ಡಾ. ಐ ಎ ಶೆಟ್ಡಿ, ಜಲಜಾಕ್ಷಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿಟ್ಲ, ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ ಕೊಲ್ಯ ಉಪಸ್ಥಿತರಿದ್ದರು. ಮಹಮ್ಮದ್ ಇಕ್ಬಾಲ್ ವಂದಿಸಿದರು,

LEAVE A REPLY

Please enter your comment!
Please enter your name here