ಬೆಟ್ಟಂಪಾಡಿ: ಧ.ಗ್ರಾ.ಯೋಜನೆಯ ಫಲಾನುಭವಿಗೆ ವ್ಹೀಲ್ ಚೇರ್ ವಿತರಣೆ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು, ಬೆಟ್ಟಂಪಾಡಿ ವಲಯದ  ಪಾಣಾಜೆ ಕಾರ್ಯಕ್ಷೇತ್ರದ ಸೂರಂಬೈಲ್ ನಿವಾಸಿ ಸೀತಮ್ಮ ರೈ ಎಂಬವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಲಮಂಗಲ ಕಾರ್ಯಕ್ರಮದ ಅಡಿಯಲ್ಲಿ ನೀಡುವ ವ್ಹೀಲ್ ಚೇರ್ ನ್ನು ಅ.30 ರಂದು ರೆಂಜ ಕೇಂದ್ರದಲ್ಲಿ ವಿತರಿಸಲಾಯಿತು.

ಪ್ರಭಾರ ವಲಯ ಮೇಲ್ವಿಚಾರಕಿ ಜಯಂತಿರವರು ವ್ಹೀಲ್ ಚೇರ್ ನ್ನು ಸೀತಮ್ಮರವರ ಪುತ್ರ ಗಣೇಶ ರೈಯವರಿಗೆ ಹಸ್ತಾಂತರಿಸಿದರು. ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ, ಪದ್ಮಾವತಿ.ಡಿ, ವಿ.ಎಲ್.ಇ ದಿಕ್ಷೀತಾ ಕೊಡಿಪ್ಪಾಡಿ, ಸುವಿದಾ ಸಹಾಯಕ ಗಂಗಾಧರ ನಿಡ್ಪಳ್ಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here