ಬೆದ್ರೋಡಿಯಲ್ಲಿ ಕಂಟೈನರ್‌ಗೆ ಡಿಕ್ಕಿ -ಆರೋಪಿ ಲಾರಿ ಚಾಲಕ ಖುಲಾಸೆ

0

ಪುತ್ತೂರು:೩ ವರ್ಷಗಳ ಹಿಂದೆ ಬೆದ್ರೋಡಿಯಲ್ಲಿ ಲಾರಿಯೊಂದು ಕಂಟೈನರ್‌ನ ಹಿಂಬದಿಗೆ ಡಿಕ್ಕಿಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಲಾರಿ ಚಾಲಕನನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.


ಆರೋಪಿ ಲಾರಿ ಚಾಲಕ ಮಲ್ಲಿಕಾರ್ಜುನ ಖುಲಾಸೆಗೊಂಡವರು.ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಕಾಸರಗೋಡಿಗೆ ಹೊಸ ಮಾರುತಿ ಕಾರುಗಳನ್ನು ಕೊಂಡೊಯ್ಯುತ್ತಿದ್ದ ಕಂಟೈನರ್‌ಗೆ 2020ನೇ ಸೆ.17ರಂದು ಬೆದ್ರೋಡಿ ಎಂಬಲ್ಲಿ ಹಿಂದಿನಿಂದ ಮಲ್ಲಿಕಾರ್ಜುನ ಎಂಬವರು ಚಲಾಯಿಸುತ್ತಿದ್ದ ಲಾರಿ ಡಿಕ್ಕಿಯಾಗಿತ್ತು.ಡಿಕ್ಕಿಯ ರಭಸಕ್ಕೆ ಕಂಟೈನರ್ ಲಾರಿ ಚಾಲಕ ರಾಜು ಜೋಸೆಫ್ ಎಂಬವರು ಗಾಯಗೊಂಡಿದ್ದರು.ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಲಾರಿ ಚಾಲಕ ಮಲ್ಲಿಕಾರ್ಜುನ ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದೆ.ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು, ನಿಶಾ ಕುಮಾರಿ ವಾದಿಸಿದರು.

LEAVE A REPLY

Please enter your comment!
Please enter your name here