ಅಪಘಾತದಲ್ಲಿ ಒಡಿಸ್ಸಾ ಮೂಲದ ವ್ಯಕ್ತಿ ಮೃತ್ಯು-ವಾರೀಸುದಾರರ ಪತ್ತೆಗೆ ಮನವಿ

0

ಉಪ್ಪಿನಂಗಡಿ: ಕಳೆದ ನ.1ರಂದು ರಾತ್ರಿ ಕೌಕ್ರಾಡಿ ಗ್ರಾ.ಪಂ. ಎದುರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುರೇಂದ್ರ ಮಹತೋ (35) ಅವರ ವಾರೀಸುದಾರರ ಪತ್ತೆಗೆ ಪೊಲೀಸ್ ಇಲಾಖೆ ಮನವಿ ಮಾಡಿದೆ.


ಸುರೇಂದ್ರ ಮಹತೋ ಒಡಿಸ್ಸಾ ರಾಜ್ಯದ ಲಾಲ್ಗಂಜದ ಪುರುಂತಾಂದ ಮೂಲದವರಾಗಿದ್ದು, ಕಳೆದ 15 ವರ್ಷದಿಂದ ನೆಲ್ಯಾಡಿ, ಕೌಕ್ರಾಡಿ ಕಡೆಗಳಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಸುಮಾರು 4-5 ವರ್ಷದಿಂದ ಇವರು ಕೌಕ್ರಾಡಿ ಶಾಂತಿಬೆಟ್ಟುವಿನ ಇಸ್ಮಾಯೀಲ್ ಎನ್.ಕೆ. ಎಂಬವರ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದರು. ಇವರು ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದು, ಇವರ ಮೃತ ದೇಹವು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಆದ್ದರಿಂದ ಇವರ ವಾರೀಸುದಾರರು ಯಾರಾದರೂ ಇದ್ದಲ್ಲಿ ಉಪ್ಪಿನಂಗಡಿಯಲ್ಲಿರುವ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ಕಚೇರಿ ಅಥವಾ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬಹುದೆಂದು ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here