ತ್ಯಾಗರಾಜೆ ಬಳಿ ಕಾರು ಪಲ್ಟಿ-ಪ್ರಯಾಣಿಕರಿಗೆ ಗಾಯ

0

ಪುತ್ತೂರು: ತಿಂಗಳಾಡಿ ಸಮೀಪದ ತ್ಯಾಗರಾಜೆನಗರದ ಬಳಿ ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ನ.4ರಂದು ಸಂಜೆ ನಡೆದಿದೆ. ಕುಂಬ್ರ ಕಡೆಯಿಂದ ಬೆಳ್ಳಾರೆ ಕಡೆಗೆ ಅಬ್ದುಲ್ಲಾ ಎಂಬವರು ಚಲಾಯಿಸುತ್ತಿದ್ದ ಅಲ್ಟೋ ಕಾರು ತ್ಯಾಗರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಕಾರಿನಲ್ಲಿದ್ದ ನಾಲ್ಕು ಮಂದಿ ಮಹಿಳೆಯರಿಗೆ ಮತ್ತು ಮೂವರು ಪುಟ್ಟ ಮಕ್ಕಳಿಗೆ ಅಲ್ಪ ಗಾಯಗಳಾಗಿದೆ. ಕಾರು ಚಾಲಕನ ಕೈಗೆ ಗಾಯವಾಗಿದೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗಿದೆ.

ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಕಾರು ಪಲ್ಟಿಯಾದ ಕೂಡಲೇ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಸಾರೆಪುಣಿಯ ಬಿ.ಕೆ ಉಮ್ಮರ್ ಎಂಬವರು ಕಾರಿನ ಗಾಜನ್ನು ಒಡೆದು ಕಾರಿನಲ್ಲಿದ್ದವರನ್ನು ಹೊರೆ ತೆಗೆಯಲು ಸಹಕರಿಸಿದ್ದಾರೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here