![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2023/11/05f68b4e-10af-4d91-9bd3-21a142467a93.jpg)
ಪುತ್ತೂರು: ಅಳಿಕೆ ಗ್ರಾಪಂ ವತಿಯಿಂದ ಉದ್ಯೊಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಸಂಜೀವಿನಿ ಕಟ್ಟಡದ ಉದ್ಘಾಟನಾ ಸಮಾರಂಭವು ಹಾಗೂ ಸ್ವಚ್ಚತಾ ವಾಹನದ ಚಾಲನಾ ಕಾರ್ಯಕ್ರಮ ನ.7 ರಂದು ನಡೆಯಿತು. ಸಂಜೀವಿನಿ ಕಟ್ಟಡವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು.
![](https://puttur.suddinews.com/wp-content/uploads/2023/11/e6d5fa86-5dfb-4bd8-879d-643590bc51f2.jpg)
ನಿವೃತ್ತ ಪಿಡಿಒ ಜಿನ್ನಪ್ಪ ಗೌಡ ಅವರನ್ನು ಕಾರ್ಯಕ್ರಮದಲ್ಲಿ ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಣ ಪದ್ಮನಾಭ ಪೂಜಾರಿ, ಶಾಸಕ ಅಶೋಕ್ ಕುಮಾರ್ ರೈ, ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಕಾರ್ಯದರ್ಶಿ ಚಂದ್ರಶೇಖರ ಭಟ್, ಬಂಟ್ವಾಳ ತಾಲೂಕು ಇ ಒ ಮಹೇಶ್ ಕುಮಾರ್, ಉದ್ಯೋಗ ಖಾತರಿ ನಿರ್ದೆಶಕ ದಿನೇಶ್, ಒಕ್ಕೂಟದ ಮೇಲ್ವಿಚಾರಕಿ ಕುಸುಮ, ಗ್ರಾಪಂ ಉಪಾಧ್ಯಕ್ಷೆ ಭಾಗೀರಿ, ಪಿಡಿಒ ದನಂಜಯ, ಗ್ರಾಪಂ ಸದಸ್ಯರುಗಳು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಕಾನ ಈಶ್ವರ ಭಟ್ ಸ್ವಾಗತಿಸಿದರು.