ಅಳಿಕೆ ಗ್ರಾಪಂ ನೂತನ ಸಂಜೀವಿನಿ ಕಟ್ಟಡ ಉದ್ಘಾಟನೆ

0

ಪುತ್ತೂರು: ಅಳಿಕೆ ಗ್ರಾಪಂ ವತಿಯಿಂದ ಉದ್ಯೊಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಸಂಜೀವಿನಿ ಕಟ್ಟಡದ ಉದ್ಘಾಟನಾ ಸಮಾರಂಭವು ಹಾಗೂ ಸ್ವಚ್ಚತಾ ವಾಹನದ ಚಾಲನಾ ಕಾರ್ಯಕ್ರಮ ನ.7 ರಂದು ನಡೆಯಿತು. ಸಂಜೀವಿನಿ ಕಟ್ಟಡವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು.

ನಿವೃತ್ತ ಪಿಡಿಒ ಜಿನ್ನಪ್ಪ ಗೌಡ ಅವರನ್ನು ಕಾರ್ಯಕ್ರಮದಲ್ಲಿ ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಣ ಪದ್ಮನಾಭ ಪೂಜಾರಿ, ಶಾಸಕ ಅಶೋಕ್ ಕುಮಾರ್ ರೈ, ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಕಾರ್ಯದರ್ಶಿ ಚಂದ್ರಶೇಖರ ಭಟ್, ಬಂಟ್ವಾಳ ತಾಲೂಕು ಇ ಒ ಮಹೇಶ್ ಕುಮಾರ್, ಉದ್ಯೋಗ ಖಾತರಿ ನಿರ್ದೆಶಕ ದಿನೇಶ್, ಒಕ್ಕೂಟದ ಮೇಲ್ವಿಚಾರಕಿ ಕುಸುಮ, ಗ್ರಾಪಂ ಉಪಾಧ್ಯಕ್ಷೆ ಭಾಗೀರಿ, ಪಿಡಿಒ ದನಂಜಯ, ಗ್ರಾಪಂ ಸದಸ್ಯರುಗಳು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಕಾನ ಈಶ್ವರ ಭಟ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here