ನೂಜಿಬಾಳ್ತಿಲ ಗ್ರಾ.ಪಂನಲ್ಲಿ ಪಂಚಶ್ರೀ ಸಂಜೀವಿನಿ ಒಕ್ಕೂಟದ ಸಭೆ, ಮಾಸಿಕ ಗ್ರಾಮೀಣ ರೈತ ಸಂತೆ

0

ಕಡಬ: ಪಂಚಶ್ರೀ ಸಂಜೀವಿನಿ ಒಕ್ಕೂಟದ ಮಾಸಿಕ ಒಕ್ಕೂಟ ಸಭೆ ಮತ್ತು ಮಾಸಿಕ ಗ್ರಾಮೀಣ ರೈತ ಸಂತೆ ನೂಜಿಬಾಳ್ತಿಲ ಗ್ರಾ.ಪಂನಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ, ಪಿಡಿಓ ಗುರುವ ಎಸ್, ಒಕ್ಕೂಟದ ಪದಾಧಿಕಾರಿಗಳು, ಸಖಿಗಳು, ಎಂಬಿಕೆ, ಘನತ್ಯಾಜ್ಯ ಸಿಬ್ಬಂದಿ, ಪದಾಧಿಕಾರಿಗಳು ಭಾಗವಹಿಸಿದ್ದರು.ಸಂತೆಯಲ್ಲಿ ಬಸಳೆ 1 ಕಟ್ಟು ರೂ 25ರಂತೆ, ಸೌತೆ ಕೆಜಿ ರೂ 40ರಂತೆ, ಬೆಂಡೆಕಾಯಿ ಕೆ.ಜಿ ರೂ 60 ರಂತೆ, ಅಲಸಂಡೆ ಕೆ.ಜಿ ರೂ 40ರಂತೆ, ಗೆರಟೆ ಸೌಟು 1 ಕ್ಕೆ 25 ರಂತೆ ಮತ್ತು ವೀಳ್ಯದೆಲೆ 1 ಕಟ್ಟು 25 ರಂತೆ ಮಾರಾಟ ಮಾಡಲಾಯಿತು. ಇವೆಲ್ಲಾ ಸಂಜೀವಿನಿ ಸದಸ್ಯರು ಮನೆಯಲ್ಲೇ ಬೆಳೆದ ತರಕಾರಿಗಳು ಎನ್ನುವುದು ವಿಶೇಷ. ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ ಅವರು ಇದೇ ಸಂದರ್ಭದಲ್ಲಿ ಉಳ್ಳಾಲ್ತಿ ಸಂಘಕ್ಕೆ ಸಾಲದ ಚೆಕ್ ವಿತರಿಸಿದರು.

LEAVE A REPLY

Please enter your comment!
Please enter your name here