ಪುತ್ತಿಲ ಪರಿವಾರ ಧಾರ್ಮಿಕ ಸೇವಾ ಘಟಕ ಕೆಯ್ಯೂರು ವತಿಯಿಂದ ರಾಮತಾರಕ ಹವನ ಮತ್ತು ಸಾರ್ವಜನಿಕ ಶ್ರೀ ದುರ್ಗಾಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೆಯ್ಯೂರು: ಪುತ್ತಿಲ ಪರಿವಾರ ಧಾರ್ಮಿಕ ಸೇವಾ ಘಟಕ ಕೆಯ್ಯೂರು ವತಿಯಿಂದ ಲೋಕಕಲ್ಯಾಣಾರ್ಥವಾಗಿ ರಾಮತಾರಕ ಹವನ ಮತ್ತು ಸಾರ್ವಜನಿಕ ಶ್ರೀ ದುರ್ಗಾಪೂಜೆಯು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರು ವಠಾರದಲ್ಲಿ ನ.25ರಂದು ನಡೆಯಲಿದೆ. ಆ ಪ್ರಯುಕ್ತ ದೇವಳದ ಪ್ರದಾನ ಅರ್ಚಕ ಶ್ರೀನಿವಾಸ ರಾವ್, ಆನಂದ್ ಭಟ್ ಕೆಯ್ಯೂರು ಆಮಂತ್ರಣ ಪತ್ರಿಕೆ, ಪಲಪುಷ್ಪ ದೇವರಿಗೆ ಅರ್ಪಿಸಿ, ಪೂಜೆ ಸಲ್ಲಿಸಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಅಧ್ಯಕ್ಷ ಪ್ರಸನ್ನ ಮಾರ್ತ ಆಮಂತ್ರಣ ಪತ್ರಿಕೆಯನ್ನು ನ.8ರಂದು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕೆಯ್ಯೂರು ಧಾರ್ಮಿಕ ಸೇವಾ ಘಟಕ ಗೌರವಧ್ಯಕ್ಷ ಸುಭ್ರಾಯ ಭಟ್ ಪಲ್ಲತ್ತಡ್ಕ, ಕಾರ್ಯಧ್ಯಕ್ಷ ರಘರಾಮ ಪಲ್ಲತ್ತಡ್ಕ, ಅಧ್ಯಕ್ಷ ದಿವಾಕರ ಪೂಜಾರಿ ಪಲ್ಲತ್ತಡ್ಕ, ಉಪಾಧ್ಯಕ್ಷರಾದ ಕಿಶೋರ್ ಭಟ್ ಅರ್ತ್ಯಡ್ಕ, ರಿತೇಶ್ ಪಾಟಾಳಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕಟ್ಟತ್ತಾರು, ವೈದಿಕ ಸಮಿತಿ ಸಂಚಾಲಕ ಗಣೇಶ್ ಭಟ್ ಕೈತ್ತಡ್ಕ, ವೇದಿಕೆ ಸಮಿತಿ ಸಂಚಾಲಕ ಶ್ರೀಪತಿ ಭಟ್ ಕೆಯ್ಯೂರು, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಅಧ್ಯಕ್ಷ ದೇವಣ್ಣ ನಾಯ್ಕ, ತಿಂಗಳಾಡಿ ಪುತ್ತಿಲ ಪರಿವಾರ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಅಭಿನವ ಕೇಸರಿ ಮಾಡಾವು ಅಧ್ಯಕ್ಷ ಶಶಿಧರ ಆಚಾರ್ಯ, ಮೋಹನ ಅಜಿಲ ಕೆಯ್ಯೂರು, ಜಗದೀಶ್ ಅಚಾರ್ಯ ತಿಂಗಳಾಡಿ, ಚಂದ್ರಶೇಖರ ರೈ ಕಜೆ ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here